ಭಟ್ಕಳ: ಕಾರ್ಪೋರೇಶನ್ ಬ್ಯಾಂಕಿನ ಭಟ್ಕಳ ಶಾಖೆಯ ಎಟಿಎಂ ಯಂತ್ರಗಳು ಗ್ರಾಹಕರಿಗೆ ತೊಂದರೆಯನ್ನು ಕೊಡುತ್ತಿದ್ದು ಹಣ ತೆಗೆಯಲು ಬಂದವರು ಬ್ಯಾಂಕಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇಲ್ಲಿನ ಕಾರ್ ಸ್ಟ್ರೀಟ್ ನಲ್ಲಿರುವ ಎಟಿಎಂ ಯಂತ್ರದಲ್ಲಿ ಹಣ ತೆಗೆಯಲು ಹೋದ ಗ್ರಾಹಕರಿಗೆ ಹಣವು ಹೊರಬರದೆ ಅತ್ತ ಯಂತ್ರದೊಳಗೆ ಹೋಗದೆ ಅರ್ದದಲ್ಲಿ ಸಿಲುಕಿಕೊಂಡು ಗ್ರಾಹಕ ನೀರಿಳಿಸುತ್ತಿದೆ. ಹಣವನ್ನು ತೆಗೆಯಲು ಬಾರದೆ ಅತ್ತ ಅದನ್ನು ಹಾಗೆಯೇ ಬಿಟ್ಟು ಹೋಗದೆ ಪ್ರಾಣಸಂಕಟವನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ಅಲ್ಲದೆ ಯಂತ್ರದಲ್ಲಿ ಹತ್ತಾರು ಸಲ ಕಾರ್ಡ ಹಾಕಿದ ಬಳಿಕವಷ್ಟೆ ಹಣ ಬರುತ್ತದೆ ಅದೂ ಪೂರ್ತಿ ಹೊರಬರದೆ ಅರ್ದದಲ್ಲೇ ನಿಂತು ಬಿಡುತ್ತದೆ ಹೀಗಾದರೆ ಗ್ರಾಹಕರ ಗತಿ ಏನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ರಾಹೆ.66ರ ಕಾಮಾಕ್ಷಿ ಪೆಟ್ರೋಲ್ ಪಂಪ್ ಬಳಿ ಇರುವ ಇದೇ ಬ್ಯಾಂಕಿನ ಎಟಿಎಂ ಯಂತ್ರದ ಕತೆ ಬೇರೆಯೇ ಆಗಿದೆ. ಯಾವಾಗ ನೋಡಿದರೂ ಅಲ್ಲಿ ಹಣವೇ ಇರುವುದಿಲ್ಲ. ಹಾಗಾಗಿ ಗ್ರಾಹಕರು ಆ ಮುಖಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.
ಬ್ಯಾಂಕಿನ ವ್ಯವಸ್ಥಾಪಕರು ಎಟಿಎಂ ಯಂತ್ರವನ್ನು ಸರಿಯಾಗಿಟ್ಟುಕೊಂಡು ಗ್ರಾಹರಿಗಾಗು ತೊಂದರೆಯನ್ನು ನೀಗಿಸಲಿ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿದೆ.