ಭಟ್ಕಳ: ಪ್ರವಾಸಿಗರನ್ನು ಹೊತ್ತು ತಂದಿದ್ದ ಮಿನಿ ಬಸ್ಸೊಂದು ಸಮುದ್ರದಲ್ಲಿ ಜಾರಿ ಸಮುದ್ರನೀರಿಗೆ ಕೊಚ್ಚಿ ಹೋಗುತ್ತಿದ್ದಾಗ ಸ್ಥಳಿಯರ ಸಮಯ ಪ್ರಜ್ಷೆಯಿಂದಾಗಿ ರಕ್ಷಣೆ ಪಡೆದ ಘಟನೆ ಮುರುಢೇಶ್ವರ ಸಮುದ್ರದ ಬೀಚ್ ನಲ್ಲಿ ಗುರುವಾರ ಜರಗಿದೆ.
ಬೆಂಗಳೂರು ಮೂಲದ ಪ್ರವಾಸಿಗರು ಮಿನಿ ಬಸ್ಸಿನಲ್ಲಿ ಮುರುಡೇಶ್ವರಕ್ಕೆ ಪ್ರವಾಸ ಕೈಕೊಂಡಿದ್ದು ಸಮುದ್ರದಡದಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಬಸ್ಸಿನ ಚಕ್ರಗಳು ಮರಳಿನಲ್ಲಿ ಹುಗಿಯಲು ಪ್ರಾರಂಭಿಸಿದವು. ಇದನ್ನು ಕಂಡ ಪ್ರವಾಸಿಗರು ಬೊಬ್ಬಿಡಲು ಆರಂಭಿಸಿದಾಗ ಸ್ಥಳಿಯರ ಸಮಯಪ್ರಜ್ಞೆಯನ್ನು ಮೆರೆಯುವುದರ ಮೂಲಕ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಸ್ಸನ್ನು ರಕ್ಷಿಸಿ ದಡಕ್ಕೆ ತಂದರು ಎಂದು ಹೇಳಲಾಗುತ್ತಿದೆ. ಮೊದಲು ಟ್ಯ್ರಾಕ್ಟರ್ ಮೂಲಕ ಅದನ್ನು ಕಟ್ಟಿ ಎಳೆದರೂ ಸಾಧ್ಯವಾಗದೇ ಇರುವುದರಿಂದಾಗಿ ಕ್ರೇನ್ ಮೂಲಕ ಬಸ್ಸನ್ನು ಸಮುದ್ರದಿಂದ ಹೊರಗಡೆಗೆ ಎಳೆದು ತರಲಾಯಿತು ಎಂದು ಹೇಳಾಗುತ್ತಿದೆ.