ಅಖಿಲಾ ಭಾರತ ಮದರಸಾ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟ
• ಉತ್ತರಕನ್ನಡ ಜಿಲ್ಲೆಯ ಮೂರು ವಿದ್ಯಾರ್ಥಿಳಿಂದ ರಾಷ್ಟ್ರೀಯ ಮಟ್ಟದ ಸಾಧನೆ
ಭಟ್ಕಳ: ದೇಶದ ವಿವಿಧ ಮದರಸಾ ವಿದ್ಯಾರ್ಥಿಗಳಿಗಾಗಿ ಇತ್ತಿಚೆಗೆ ಉತ್ತರಪ್ರದೇಶದ ಲಖ್ನೋ ದಲ್ಲಿ ಜರಗಿದ ಮದರಸಾ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆಂದು ವರದಿಯಾಗಿದೆ.
ಗುಂಡು ಎಸೆತದಲ್ಲಿ (ಶಾಟ್ಪುಟ್) ಭಟ್ಕಳದ ಝುಹೇರ್ ಬಿನ್ ಝುಬೇರ್ ಅರ್ಮಾರ್ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. 100ಮೀಟರ್ ಓಟದಲ್ಲಿ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಅರ್ಷ್ ಆಹಮದ್ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನಗಳಿಸಿಕೊಂಡಿದ್ದಾರೆ. ಮತ್ತು ಸುಫಿಯಾನ್ ಬಿನ್ ಸಲ್ಮಾನ್ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ಉತ್ತರಕನ್ನಡ ಜಿಲ್ಲೆಯ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಎತ್ತರಿಸಿದ್ದಾರೆ.
ರಾಷ್ಟ್ರೀಯ ಮದರಸಾ ಅಥ್ಲೆಟಿಕ್ ಕೂಟದಲ್ಲಿ ಭಟ್ಕಳ, ಹೊನ್ನಾವರದ 8 ವಿದ್ಯಾರ್ಥಿಗಳು ಸೇರಿದಂತೆ ದೇಶದ ಪ್ರಮುಖ ಮದರಸಾಗಳಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳದ ವಿವಿಧ ಶಿಕ್ಷಣ ಸಂಸ್ಥೆಯ ಮುಖಂಡರು, ಮದರಸಾ ಸಂಸ್ಥೆಯ ಪ್ರಾಂಶುಪಾಲರು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಪದಾಧಿಕಾರಿ ಅಭಿನಂದಿಸಿದ್ದಾರೆ.