ಜೀವ ವೈವಿಧ್ಯ ಸಮೃದ್ದಿಗೆ ಹಲವು ಚಟುವಟಿಕೆಗಳು ಜಾರಿಯಾಗಲಿ: ಅನಂತ ಹೆಗಡೆ ಅಶೀಸರ

Source: SO News | By Laxmi Tanaya | Published on 8th September 2021, 8:54 AM | State News | Don't Miss |

ಶಿವಮೊಗ್ಗ :  ಸೊರಬ ತಾಲ್ಲೂಕಿನ ಪಿಳಲಿ ಪಾರಂಪರಿಕ ವೃಕ್ಷಕ್ಕೆ ರಾಜ್ಯ ಮಟ್ಟದ ಮಾನ್ಯತೆ ಇದೆ. ಇಲ್ಲಿರುವ ದೇವರು ಕಾಡುಗಳಿಗೆ ಜಾಗತಿಕ ಮನ್ನಣೆ ಇದೆ. ಇತಿಹಾಸ ಪ್ರಸಿದ್ದ ಕೆರೆಗಳು ಇದ್ದು ಜೀವವೈವಿಧ್ಯ ಸಂರಕ್ಷಕರನ್ನು ಅಭಿನಂದಿಸುವ ಕೆಲಸ ಆಗಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿಪ್ರಾಯಪಟ್ಟರು.

   ಜೀವವೈವಿಧ್ಯ ತಜ್ಞರ ತಂಡದೊಂದಿಗೆ ಸೊರಬ ತಾಲ್ಲೂಕಿನ ಅರಣ್ಯ, ಕಾನುಪ್ರದೇಶಗಳು, ಹೊಸಬಾಳೆ ಸಮೀಪ ಮೊಡಗೋಡದ ಶ್ರೀಗಂಧವನ ನಿರ್ಮಾಣವನ್ನು ವೀಕ್ಷಿಸಿ ಅವರು ಮಾತನಾಡಿದರು.

     ಅರಣ್ಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಭೇಟಿ ಮಾಡಿ ವನ ಸಂರಕ್ಷಣೆ, ಬೆಟ್ಟ ಅಭಿವೃದ್ದಿ ಬಗ್ಗೆ ಮಾತುಕತೆ ನಡೆಸಿದ ಅವರು ಕದಂಬ ವೃಕ್ಷವನ್ನು ನೆಟ್ಟು ಕಾನುಗಳ ರಕ್ಷಣೆಯಿಂದ ರೈತರು ಸಮೃದ್ದಿ ಹೊಂದುತ್ತಾರೆಂದು ಹೇಳಿದರು.

    ಭೇಟಿಗೂ ಮುನ್ನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮತ್ತು ತಾಲ್ಲೂಕು ಜೀವ ವೈವಿಧ್ಯ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಜನಪದ ವೈದ್ಯರ ಸಮಾವೇಶ, ಹಸಿರು ಶಾಲೆಗಳಿಗೆ ಪ್ರೋತ್ಸಾಹ, ಕೆರೆ-ಕಾನು-ಕೃಷಿ ವೈವಿಧ್ಯ ರಕ್ಷಣೆಗೆ ಮುಂದಾದವರನ್ನು ಅಭಿನಂದಿಸುವ ಕಾರ್ಯ ನಡೆಯಬೇಕು ಎಂದು ಸೂಚಿಸಿದರು.

       ಸಾಂಪ್ರದಾಯಿಕ ಭತ್ತದ ತಳಿ, ವಿನಾಶದ ಅಂಚಿನಲ್ಲಿರುವ ಮಾವು, ಹಲಸು ತಳಿಗಳ ಉಳಿವಿನ ಕುರಿತು ರೈತರೊಂದಿಗೆ ಸಂವಾದ ನಡೆಸಬೇಕು. ಜೀವ ವೈವಿಧ್ಯ ಕಾಯ್ದೆ ಬಗ್ಗೆ ವಕೀಲರ ತಂಡಕ್ಕೆ ಜಾಗೃತಿ ಮಾಹಿತಿ ನೀಡಬೇಕು ಎಂದರು.

     ಈ ವೇಳೆ ಮಂಡಳಿ ಸದಸ್ಯ ವೆಂಕಟೇಶ, ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಹೊಸಬಾಳೆ ಗ್ರಾ.ಪಂ ಅಧ್ಯಕ್ಷ ಸತ್ಯನಾರಾಯಣ್, ಜೀವವೈವಿಧ್ಯ ಸಮಿತಿ ಅಧ್ಯಕ್ಷ ರಾಮಪ್ರಸಾದ್, ಕಂಚಿ ಶಿವರಾಂ, ಗ್ರಾಮದ ಹಿರಿಯ ಮುಖಂಡರು, ಅರಣ್ಯ ಅಧಿಕಾರಿಗಳು ಇದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...