ಭಟ್ಕಳ: ಪಟ್ಟಣದ ಕೋಟೇಶ್ವರ ನಗರದ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ವ್ಯಕ್ತಿಯೋರ್ವ ಹಾಡು ಹಗಲೇ ದೇವಸ್ಥಾನದೊಳಗಿನ ಕಾಣಿಕೆ ಕಬ್ಬಿಯನ್ನು ಒಡೆದು ಹಣ ದೋಚಿ ಯತ್ನಿಸಿದ ಕಳ್ಳನೋರ್ವ ಅಂದಾಜು 2 ಸಾವಿರ ರೂ. ದೋಚಿದ್ದಾನೆಂದು ಬುಧವಾರದಂದು ಇಲ್ಲಿನ ನಗರ ಠಾಣೆಯಲ್ಲಿ ಕಳ್ಳತನಗೊಂಡ ಶ್ರೀ ದಂಡಿನ ದುರ್ಗಾ ದೇವಸ್ಥಾನ ಕೋಟೇಶ್ವರ ನಗರದ ಅಧ್ಯಕ್ಷ ಮೋಹನ ಭದ್ರಾ ಶಿರಾಲಿಕರ ದೂರು ನೀಡಿದ್ದಾರೆ.
ಬುಧವಾರದಂದು ಮುಂಜಾನೆ 8ಗಂಟೆಗೆ ಎಂದಿನಂತೆ ದೇವಸ್ಥಾನಕ್ಕೆ ಅರ್ಚಕರು ಬಂದಿದ್ದು ದೇವರ ಪೂಜೆಯನ್ನು 9ಗಂಟೆಗೆ ಮುಗಿಸಿ ಬೇರೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಮೋಹನ ಭದ್ರಾ ಶಿರಾಲಿಕರ 9.30ರ ತನಕ ದೇವಾಲಯದ ಪ್ರಾಂಗಣ ಸ್ವಚ್ಛಗೊಳಿಸಿ ನಂತರ ದೇವಸ್ಥಾನದಿಂದ ತೆರಳಿದ್ದಾರೆ.
ಇದಾದ ಬಳಿಕ 10.30ರ ಸುಮಾರಿಗೆ ಸ್ಥಳಿಯ ಅಂಗಡಿಕಾರನೋರ್ವ ದೇವಸ್ಥಾನಕ್ಕೆ ಕೈಮುಗಿಯಲು ಬಂದ ವೇಳೆ ಅಪರಿಚಿತ ವ್ಯಕ್ತಿಯೋರ್ವ ದೇವಾಲಯದಿಂದ ವಿಚಿತ್ರವಾಗಿ ಅನುಮಾನಾಸ್ಪದ ರೀತಿಯಲ್ಲಿ ಬಂದಿದ್ದನ್ನು ಗಮನಿಸಿದ್ದಾನೆ. ಈ ವೇಳೆ ಸ್ಥಳಿಯ ಅಂಗಡಿಕಾರ ದೇವಸ್ಥಾನದ ಒಳಗೆ ಹೊಕ್ಕುವ ವೇಳೆ ಕಾಣಿಕೆ ಡಬ್ಬಿ ತೆರೆದಿರುವುದು ಕಂಡು ಬಂದು ಅಪರಿಚಿತ ವ್ಯಕ್ತಿಯೆಡೆಗೆ ನೋಡಿದಾಗ ಹಣದ ದೋಚಿದ ಕಳ್ಳ ಪರಾರಿಯಾಗಿದ್ದಾನೆ. ತಕ್ಷಣಕ್ಕೆ ಅಂಗಡಿಕಾರ ಆತನನ್ನು ಹುಡುಕುಲು ತೆರಳಿದ್ದಾಗ ಸಿಗದ ಹಿನ್ನೆಲೆ ವಾಪಸ್ಸು ದೇವಸ್ಥಾನದತ್ತ ಬಂದಿದ್ದಾನೆ. ದೇವಾಲಯದ ಪ್ರಾಂಗಣದಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ನಂತರ ತಕ್ಷಣಕ್ಕೆ ದೇವಸ್ಥಾನದ ಆಡಳಿತ ಕಮಿಟಿಯವರಿಗೆ ಮಾಹಿತಿ ನೀಡಿದ್ದಾನೆಂದು ದೂರಿನಲ್ಲಿ ಶ್ರೀ ದಂಡಿನ ದುರ್ಗಾ ದೇವಸ್ಥಾನ ಕೋಟೇಶ್ವರ ನಗರದ ಅಧ್ಯಕ್ಷ ಮೋಹನ ಭದ್ರಾ ಶಿರಾಲಿಕರ ಉಲ್ಲೇಖಿಸಿದ್ದಾರೆ.
ಘಟನೆ ತಿಳಿದು ಸ್ಥಳಕ್ಕಾಗಮಿಸಿ ನಗರ ಠಾಣಾ ಅಪರಾಧ ವಿಬಾಗದ ಪಿಎಸೈ ಲಕ್ಕಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು ಬಂದು ಸ್ಥಳಪರಿಶೀಲನೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಕಾಣಿಕೆ ಡಬ್ಬಿಯಿಂದ ದೇವಾಲಯದ ಹೊರಾಂಗಣದ ವರೆಗೆ ರಕ್ತದ ಕಲೆ ಬಿದ್ದಿರುವುದನ್ನು ಗಮನಿಸಿದ ಅವರು ಅದರ ಪರಿಶೀಲನೆ ಕೈಗೊಂಡು ಮಾಹಿತಿ ಕಲೆ ಹಾಕಿದ್ದಾರೆ.
ಪ್ರಕರಣವನ್ನು ನಗರ ಠಾಣೆ ಅಪರಾಧ ವಿಬಾಗದ ಪಿಎಸೈ ಲಕ್ಕಪ್ಪ ನಾಯ್ಕ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.