ಕುಮಟಾ : ಸೆಲ್ಫಿ ತೆಗೆಯಲು ಹೋದ ಯುವಕನೋರ್ವ ಸಮುದ್ರಪಾಲಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ವನ್ನಳ್ಳಿ ಬಳಿ ನಡೆದಿದೆ.
ಕೊಪ್ಪಳ ಮೂಲದ 25 ವರ್ಷದ ಅಭಿಷೇಕ ಹನುಮಂತ ಬೋಯಿ ಮೃತ ದುರ್ದೈವಿ. ಕಳೆದ ಕೆಲ ದಿನಗಳಿಂದ ಲಾಕ್ ಡೌನ್ ಕಾರಣಕ್ಕಾಗಿ ಅಕ್ಕನ ಮನೆಯಲ್ಲಿಯೇ ಇದ್ದ ಈತ ನಿನ್ನೆ ವನ್ನಳ್ಳಿ ಬಳಿ ಸೆಲ್ಫಿ ತೆಗೆದುಕೊಂಡು ಮರಳಿ ಬರುತ್ತಿರುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದರು. ಈ ಘಟನೆಯನ್ನ ಸ್ಥಳೀಯೊರೊಬ್ಬು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ರು. ನಿನ್ನೆ ಸಂಜೆ ಹುಡುಕಾಟ ನಡೆಸಿದ್ರೂ ಸಿಕ್ಕಿರಲಿಲ್ಲ. ಶುಕ್ರವಾರ ಮೃತ ದೇಹ ಸಮೀಪದ ಅಳ್ವೆದಂಡೆ ಬಳಿ ಪತ್ತೆಯಾಗಿದೆ.
ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.