ಮುಂಡಗೋಡ: ಅರಣ್ಯಗಳ್ಳರಿಂದ ಕಾಡು ಉಳಿಸಿ ಎಂದು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ(ಪ್ರವೀಣ ಶೆಟ್ಟಿ ಬಣ) ಶಂಶುದ್ದಿನ ಮಾರ್ಕರ ಮುಂಡಗೋಡ ವಲಯ ಅರಣ್ಯ ಕಚೇರಿ ಎದುರಿಗೆ ಏಕಾಂಗಿಯಾಗಿ ಆಗ್ರಹಿಸಿ ಮಳೆಯಲ್ಲಿ ಧರಣಿ ಮಾಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ
ತಾಲೂಕಿನಲ್ಲಿ ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು ಕಾಡುಗಳ್ಳರ ಪಾಲಾಗುತ್ತಿದ್ದರು ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಅಪಾದಿಸಿದ್ದಾರೆ. ಗುಂಜಾವತಿ ಉಪವಲಯ ಅರಣ್ಯ ಪ್ರದೇಶಕ್ಕೆ ದಕ್ಷ ಕರ್ತವ್ಯನಿಷ್ಠ ಅಧಿಕಾರಿಯನ್ನು ನೇಮಿಸಿ. ರಾಜಕೀಯ ಜನರ ಫೋನಗಳಿಗೆ ಹೆದರಿಕೊಳ್ಳುವ ಅಧಿಕಾರಿಗಳು ಇಲ್ಲಿದ್ದರೆ ಕಾಡು, ಕಾಡುಪ್ರಾಣಿ ರಕ್ಷಿಸುವವುರು ಯಾರು. ಗುಂಜಾವತಿ ಭಾಗದಲ್ಲಿ ಅರಣ್ಯ ಅತಿಕ್ರಮಣ ಆಗಿದೆ ದಕ್ಷ ಅಧಿಕಾರಿಗಳನ್ನು ಇಲ್ಲಿ ನೇಮಿಸದೆ ಇದ್ದರೆ ಕೆಲವೆ ದಿನಗಳಲ್ಲಿ ಗುಂಜಾವತಿಯ ಭಾಗದ ಕಾಡು ಸಂಪೂರ್ಣ ನಾಶವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು
ಈ ಕುರಿತು ವಲಯ ಅರಣ್ಯ ಅಧಿಕಾರಿ ಸುರೇಶ ಕುಳ್ಳೊಳ್ಳಿಯವರನ್ನು ಕೇಳಿದಾಗ ಅಪಾದನೆ ಮಾಡಿದಂತೆ ಏನು ನಡೆದಿಲ್ಲಾ ನಡೆಯಲಿಕ್ಕೂ ಬೀಡುವುದಿಲ್ಲ. ಕಾಡು ರಕ್ಷೀಸುವ ಜವಾಬ್ದಾರಿ ನಮ್ಮ ಆದ್ಯ ಕರ್ತವ್ಯ. ಇವರು ಅಪಾದಿಸಿದಂತೆ ನಡೆಯುತ್ತಿದ್ದರೆ ಗುಂಜಾವತಿ ಭಾಗದ ಸಾರ್ವಜನಿಕರು ಸುಮ್ಮನೆ ಇರುತ್ತಿದ್ದರೆ ಎಂದು ಪ್ರಶ್ನೆಸಿದರು. ಗುಂಜಾವತಿ ಉಪವಲಯದಲ್ಲಿ ದಕ್ಷ ಅಧಿಕಾರಿಗಳೇ ಇದ್ದಾರೆ ಎಂದರು.