ಹೊನ್ನಾವರ : ತಾಲೂಕಿನ ಸರಳಗಿ ಗ್ರಾಮದ ನಿವಾಸಿಯಾದ ನಾರಾಯಣ ನಾಯ್ಕ್ ಎಂಬುವವರ ಮನೆಯ ಮೇಲೆ ಕಳೆದೆರಡು ದಿನಗಳ ಹಿಂದೆ ಉಂಟಾದ ಬಿರುಗಾಳಿಗೆ ಬೃಹತ್ ಮರವೊಂದು ಮನೆಯ ಮೇಲೆ ಬಿದ್ದು ಸಂಪೂರ್ಣ ಮನೆ ಕುಸಿದು ಬಿದ್ದಿದ್ದು ಬಡ ಸಂತ್ರಸ್ತರಿಗೆ ಸೂರು ಇಲ್ಲದಂತಾಗಿದೆ.
ಶನಿವಾರ ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಕುಟುಂಬದ ತುರ್ತು ನಿರ್ವಹಣೆಗಾಗಿ ಕುಟುಂಬಸ್ಥರಿಗೆ ವಯಕ್ತಿಕವಾಗಿ ಆರ್ಥಿಕ ನೆರವನ್ನು ನೀಡಿದರು.
ಮನೆಯು ಅರಣ್ಯ ಅತಿಕ್ರಮಣ ಜಾಗದಲ್ಲಿ ಇರುವ ಕಾರಣ ಸರ್ಕಾರದಿಂದ ನೆರೆಹಾವಳಿ ಮನೆ ಮಂಜೂರು ಮಾಡುವ ಕ್ರಿಯೆಗೆ ಮನೆಯ ದಾಖಲೆಗಳ ಸಮಸ್ಯೆ ಎದುರಾಗುವುದರಿಂದ, ಕುಟುಂಬಸ್ಥರ ಬಳಿ ಈಗಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸರ್ಕಾರದಿಂದ ಸಾಧ್ಯವಾದಷ್ಟು ಹೆಚ್ಚಿನ ವಿಶೇಷ ಆರ್ಥಿಕ ನೆರವನ್ನು ಕುಟುಂಬಕ್ಕೆ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.