ಬಸ್ ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಗಂಭೀರ; ಪ್ರಾಣಾಪಾಯದಿಂದ ಪಾರು

Source: sonews | By Staff Correspondent | Published on 24th August 2019, 5:54 PM | Coastal News |

ಭಟ್ಕಳ: ಬಸ್ ನಿಲ್ಲುವ ವೇಳೆ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಮಾರುಕೇರಿ ಪಂಚಾಯತ್ ವ್ಯಾಪ್ತಿಯ ಸಬ್ಬತ್ತಿ ಕ್ರಾಸ್ ಬಳಿ ನಡೆದಿದೆ. 
 
ಗಾಯಗೊಂಡ ವಿದ್ಯಾರ್ಥಿನಿ ಮಧುಮಿತ ಅನಂತ ಹೆಬ್ಬಾರ (16) ಎಂದು ತಿಳಿದು ಬಂದಿದ್ದು ಈಕೆ ಇಲ್ಲಿನ ಸಾಗರ ರಸ್ತೆಯ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಾಳೆ. 

ಶುಕ್ರವಾರ ಮಧ್ಯಾಹ್ನ ಬಸ್‍ನಲ್ಲಿ ಮನೆಗೆ ತೆರಳುವಾಗ ಸಬ್ಬತ್ತಿ ಕ್ರಾಸ್‍ನಲ್ಲಿ ಇಳಿಯುವ ವೇಳೆ ಕಾಲು ಜಾರಿ ಬಿದ್ದು ತಲೆ ಹಾಗೂ ಬೆನ್ನಿನ ಭಾಗದಲ್ಲಿ ಗಾಯಗೊಂಡಿದ್ದು, ತಕ್ಷಣ ವಿದ್ಯಾರ್ಥಿನಿಯನ್ನು ಖಾಸಗಿ ವಾಹನದಲ್ಲಿ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...