ಮುಂಡಗೋಡ: ತೋಟಕ್ಕೆ ನುಗ್ಗಿ ಯಾರೋ ದುಷ್ಕರ್ಮಿಗಳು ಅಡಿಕೆ ಹಾಗೂ ಬಾಳೆಗಿಡಗಳನ್ನು ಕತ್ತರಿಸಿ ಹಾಳು ಮಾಡಿಹೋಗಿರುವ ಘಟನೆ ತಾಲೂಕಿನ ಟಿಬೇಟ್ ಕ್ಯಾಂಪ್ 1 ರಲ್ಲಿ ನಡೆದಿದೆ.
ಮಿಗ್ಮಾರ್ ಲೋಬ್ಸಾಂಗ್ ರಿಂಚೆನ್ ಎಂಬ ಟಿಬೇಟಿ ರೈತ ರೈತನಿಗೆ ಸೇರಿದ ತೋಟದಲ್ಲಿ ದುಷ್ಕರ್ಮಿಗಳು ತಮ್ಮ ನೀಚ ಬುದ್ದಿಯನ್ನು ತೋರಿಸಿದ್ದಾರೆ.
ತೋಟದಲ್ಲಿ 58 ಬಾಳೆಗಿಡ ಹಾಗೂ 10 ಅಡಿಕೆ ಗಿಡಗಳನ್ನು ಕತ್ತರಿಸಿದ್ದಾರೆ. ಬೆಡ್ ಹಾಗೂ ಕಾಟನ್ ಸುಟ್ಟು ಔಷಧಿ ಸಿಂಪಡಿಸುವ ಪಂಪ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುಕೃತ್ಯವನ್ನು ಮಂಗವಾರ ಸಂಜೆಯಿಂದ ಬುಧವಾರ ಬೆಳಗಿನ ಜಾವದ ಸಮಯದಲ್ಲಿ ನಡೆದಿರ ಬಹುದು ಎಂದು ರೈತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.