ಭಟ್ಕಳದಲ್ಲಿ ಬಕ್ರೀದ್‍ಗಾಗಿ ಸಾವಿರಾರು ಕುರಿಗಳ ಮಾರಾಟ

Source: S.O. News Service | By V. D. Bhatkal | Published on 1st August 2020, 1:30 AM | Coastal News | Special Report |

ಭಟ್ಕಳ: ಕೊರೊನಾ ತಡೆ ಲಾಕ್‍ಡೌನ್ ತೆರವು ಬೆನ್ನಿಗೇ ಭಟ್ಕಳದಲ್ಲಿ ಸಡಗರ ಸಂಭ್ರಮದೊಂದಿಗೆ ಈದ್ ಉಲ್ ಆಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಲು ಇಲ್ಲಿನ ಮುಸ್ಲೀಮ್ ಧರ್ಮೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಸಂಕಷ್ಟ ಕಳಚಿಕೊಂಡು ಸಂತಸ ಹಂಚಿಕೊಳ್ಳುವ ನಿಟ್ಟಿನಲ್ಲಿ ಭಟ್ಕಳ ಪೇಟೆಯ ತುಂಬ ಚಟುವಟಿಕೆ ಜೋರಾಗಿದೆ.

ರಮಜಾನ್ ಮಾಸಾಚರಣೆಯ ನಂತರ ಆಚರಿಸಲಾಗುವ ಈದ್ ಉಲ್ ಫಿತ್ರ್ ಮತ್ತು ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಮುಸ್ಲೀಮರು ವರ್ಷದಲ್ಲಿ

ಕೊರೊನಾ ಇರಲಿ, ಬೇರೆ ಯಾವುದೇ ಕಾಯಿಲೆ ಇರಲಿ ಜನರು ಪರಿಹಾರಕ್ಕಾಗಿ ಅಲ್ಲಾಹುನನ್ನೇ ಪ್ರಾರ್ಥಿಸುತ್ತಾರೆ. ಈಗಿನ ಕೊರೊನಾ ಕಾಲದಲ್ಲಿಯೂ ಸಹಜವಾಗಿ ಧರ್ಮಾಚರಣೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಈ ವರ್ಷ ಜಾನುವಾರು ಮಾರಾಟವೂ ಕಡಿಮೆಯಾಗಿರುವುದರಿಂದ ಕುರಿಗಳ ಮಾರಾಟದಲ್ಲಿ ಏರಿಕೆಯಾಗಿದೆ. 

- ಅರ್‍ಸಲಾನ್ ಮೋಟಿಯಾ, ಮೋಟಿಯಾ ಘೋಟ್ ಫಾರ್ಮ ಮಾಲಕರು, ಭಟ್ಕಳ

ಆಚರಿಸಿಕೊಂಡು ಬಂದಿರುವ ಹಬ್ಬಗಳು. ಕೊರೊನಾ ಕಾಟದಿಂದಾಗಿ ಈ ವರ್ಷ ರಮಜಾನ್ ಉಪವಾಸ ಹಾಗೂ ಈದ್ ಉಲ್ ಫಿತ್ರ್ ಆಚರಣೆ ಮನೆಯನ್ನು ಬಿಟ್ಟು ಹೊರಗೆ ಬಂದಿರಲಿಲ್ಲ. ಮಸೀದಿಗಳಲ್ಲಿ ಪ್ರಾರ್ಥನೆಗೂ ಅವಕಾಶ ಸಿಕ್ಕಿರಲಿಲ್ಲ. ಉಳಿದ ಜನರಂತೆ ಒತ್ತಡದಲ್ಲಿಯೇ ಕಾಲ ಕಳೆದಿದ್ದ ಇಸ್ಲಾಮ್ ಧರ್ಮೀಯರು ಇದೀಗ ಲಾಕ್‍ಡೌನ್ ತೆರವಿನಿಂದಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಹಬ್ಬದ ಸಂಪೂರ್ಣ ಸವಿಯನ್ನು ಸವಿಯಲು ಉತ್ಸುಕರಾಗಿದ್ದಾರೆ. ಪರಿಣಾಮವಾಗಿ ಕಳೆದ 5 ದಿನಗಳ ಅವಧಿಯಲ್ಲಿ ಭಟ್ಕಳ ಪೇಟೆಗೆ ಹಳೆಯ ರಂಗು ಬಂದು ಬಿಟ್ಟಿದೆ. ಬಟ್ಟೆಬರೆ, ದಿನಸಿಗಳಿಂದ ಹಿಡಿದು ಅಲಂಕಾರಿಕಾ ಸಾಮಾನುಗಳವರೆಗೆ ಖರೀದಿ ಕಾರ್ಯದಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕುರಿಗಳ ಭರ್ಜರಿ ವ್ಯಾಪಾರ:
ಬಕ್ರೀದ್ ಹಿನ್ನೆಲೆಯಲ್ಲಿ ಕುರಿಗಳ ವ್ಯಾಪಾರ ಕಸುವು ಪಡೆದುಕೊಂಡಿದೆ. ಪ್ರತಿ ಕುರಿಗೆ 10 ಸಾವಿರದಿಂದ 30 ಸಾವಿರದವರೆಗೂ ಕುರಿಗಳ ದರವನ್ನು ನಿಗದಿಪಡಿಸಲಾಗಿದೆ. ಕಳೆದ 5 ದಿನಗಳ ಅವಧಿಯಲ್ಲಿ ಭಟ್ಕಳ ಪಟ್ಟಣ ಪ್ರದೇಶವೊಂದರಲ್ಲಿಯೇ 2500ಕ್ಕೂ ಹೆಚ್ಚು ಕುರಿಗಳ ಮಾರಾಟವಾಗಿದೆ. ಮುಂದಿನ ಸೋಮವಾರದವರೆಗೂ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇನ್ನೂ 1500ಕ್ಕೂ ಹೆಚ್ಚು ಕುರಿಗಳ ಮಾರಾಟವಾಗುವ ಸಾಧ್ಯತೆ ಇದೆ. ವಿಶೇಷ ಎಂದರೆ ಈ ಬಾರಿ ಭಟ್ಕಳದಲ್ಲಿ ಕುರಿಗಳ ವ್ಯಾಪಾರ ಹಳೆಯ ದಾಖಲೆಯನ್ನೆಲ್ಲ ಮುರಿದು ಹಾಕಿದ್ದು, ಹೆಚ್ಚುಕಡಿಮೆ ರು.1ಕೋ. ವ್ಯಾಪಾರ ವ್ಯವಹಾರದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಒಂದು ಕಡೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವ ಬಯಕೆ, ಇನ್ನೊಂದೆಡೆ ಬಕ್ರೀದ್‍ಗೆ ಬಲಿಯಾಗುತ್ತಿದ್ದ ಜಾನುವಾರುಗಳ ಆಮದು ಕಡಿಮೆಯಾಗಿರುವುದು ಕುರಿಗಳತ್ತ ಜನರು ಒಲವು ತೋರಲು ಕಾರಣ ಎನ್ನುವುದು ಇಲ್ಲಿನ ಜನರ ತರ್ಕವಾಗಿದೆ. 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...