ಧಾರವಾಡ : ಡಾ.ಸ್ವಾಮಿನಾಥನ್ ವರದಿ ಪ್ರಕಾರ ಕಬ್ಬನ್ನೂ ಸೇರಿ ವಿವಿಧ 26 ಬೆಳೆಗಳಿಗೆ ನಿಗದಿತ ಬೆಲೆ ನೀಡಲು ಶಿಫಾರಸ್ಸು ಮಾಡಲಾಗಿದೆ. ಇದನ್ನು ಅನುμÁ್ಠನಗೊಳಿಸಿ ರೈತರ ಹಿತಕಾಯುವ ಕಾರ್ಯ ಮಾಡಲು ಪ್ರಧಾನ ಮಂತ್ರಿಗಳು ಮುಂದಾಗಿದ್ದಾರೆ. ರೈತರು ಅತಿಯಾದ ವಿಷಪೂರಿತ ರಸಾಯನಿಕಗಳ ಬಳಕೆ ಕೈಬಿಟ್ಟು, ಸಾವಯವ ಪದ್ಧತಿ ಅಳವಡಿಕೆಗೆ ಆದ್ಯತೆ ನೀಡಿ ಆರೋಗ್ಯ ಮತ್ತು ಆರ್ಥಿಕ ಸಾಮಥ್ರ್ಯ ವೃದ್ಧಿಸಬೇಕು ಎಂದು ಉಪಮುಖ್ಯಮಂತ್ರಿ, ಸಹಕಾರ ಕೃಷಿ ಸಚಿವ ಹಾಗೂ ಕೃಷಿ ವಿವಿ ಸಹಕುಲಾಧಿಪತಿ ಲಕ್ಷ್ಮಣ ಸವದಿ ಹೇಳಿದರು.
ಕೃಷಿಮೇಳದಲ್ಲಿ ವಿವಿಧ ಪ್ರಕಟಣೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಪ್ರತಿವರ್ಷ ಸೆಪ್ಟಂಬರ್, ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಕೃಷಿಮೇಳ ನಡೆಯುತ್ತಿತ್ತು.ಈ ಬಾರಿ ನೆರೆ ಹಾಗೂ ಪ್ರವಾಹದ ಕಾರಣದಿಂದ ಮುಂದೂಡಲಾಗಿತ್ತು.ಕೃಷಿಮೇಳ ಆಚರಣೆ ಕೈಬಿಡುವುದು ಬೇಡ ಎಂಬ ಆಶಯದಿಂದ ಈಗ ಆಯೋಜಿಸಲಾಗಿದೆ.
ಬರಗಾಲದಿಂದ, ನೀರಿನ ಅಂತರ್ಜಲ ಮಟ್ಟದ ಕುಸಿತವಾಗಿರುವ ಭಾಗಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜನೆ ರೂಪಿಸಿ, 800 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಬೆಳಗಾವಿ ,ವಿಜಯಪುರ,ಬಾಗಲಕೋಟ ಭಾಗಗಳ ಕಬ್ಬು ಬೆಳೆಗಾರರು ಮಣ್ಣಿನ ಆರೋಗ್ಯ ಕಾಪಾಡಲು ಒತ್ತು ನೀಡಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಿದರೆ ಜಗತ್ತಿನ ಜನರ ಆರೋಗ್ಯ ಕಾಪಾಡಬಹುದು.ವಿಷಪೂರಿತ ಆಹಾರ ಸೇವನೆಯಿಂದ ಮಹಾರಾಷ್ಟ್ರದ ಒಂದು ಗ್ರಾಮದಲ್ಲಿ ಶೇ.32 ರಷ್ಟು ಜನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.ಇದಕ್ಕೆ ಅತಿಯಾದ ವಿಷಕಾರಿ ರಸಾಯನಿಕಗಳ ಬಳಕೆಯೇ ಕಾರಣ ಎಂದು ಪರೀಕ್ಷೆಯಿಂದ ತಿಳಿದು ಬಂದಿದೆ.ಕೃಷಿ ಇಲಾಖೆಯ ಅಧಿಕಾರಿಗಳು ವಿಷಪೂರಿತ ರಸಾಯನಿಕಗಳ ಮಾರಾಟ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.