ಬೀದರ : ಬೀದರ ಸಂಸದರು ಆಗಿರುವ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಇತ್ತೀಚಿಗೆ ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬೆಳೆ ಹಾನಿ ಪರಿಶೀಲನೆ ನಡೆಸಿದರು.
ಮೊದಲಿಗೆ ಕಾಡವಾದ ಬ್ರಿಡ್ಜ್ ಹತ್ತಿರದ ರೈತರ ಹೊಲಗಳಿಗೆ ಭೇಟಿ ನೀಡಿ ಕೆಲವು ಜಮೀನುಗಳಲ್ಲಿ ಉಂಟಾದ ಹಾನಿ ಪ್ರಮಾಣವನ್ನು ಸಾಂಕೇತವಾಗಿ ವೀಕ್ಷಣೆ ನಡೆಸಿದರು. ಬೆಳೆ ಹಾನಿ ಪರಿಶೀಲನೆ ನಡೆಸಿದರು. ತಮ್ಮ 3 ಎಕರೆ 6 ಗುಂಟೆ ಜಮೀನಿನಲ್ಲಿ ಸೋಯಾ ಅವರೇ ಬೆಳೆ ಹಾನಿಯಾಗಿದೆ ಎಂದು ರೈತರಾದ ವಿಶ್ವನಾಥ್ ಗುರಪ್ಪ ಮಿನಕೇರಿ ಅವರು ಸಂಸದರಿಗೆ ತಿಳಿಸಿದರು. ಬೆಳೆ ಹಾನಿಯ ಬಗ್ಗೆ ಕೇಂದ್ರ ಸಚಿವರು ಇದೆ ವೇಳೆ ಜಿಲ್ಲಾಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಜಿಲ್ಲೆಯಲ್ಲಿ ಸೆಪ್ಟೆಂಬರ್ ಮಾಹೆಯವರೆಗೆ ಸುರಿದ ಮಳೆಯಿಂದಾಗಿ ಬೀದರ ಜಿಲ್ಲೆಯಾದ್ಯಂತ ಒಟ್ಟು 23,844 ಹೆಕ್ಟೇರ್ ವಿಸ್ತರ್ಣದಲ್ಲಿನ ಬೆಳೆ ಹಾನಿಯಾಗಿದೆ. ಬೀದರ ತಾಲೂಕಿನಲ್ಲಿಯೇ 3030 ಹೆಕ್ಟೇರ್ ವಿಸ್ತರ್ಣದಲ್ಲಿನ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಸಲಾಗಿದೆ ಕೃಷಿ ಉಪ ನರ್ದೇಶಕರು ಸಚಿವರಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ಬೆಳೆಹಾನಿಯಾದ ಬಗ್ಗೆ ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳು ಸೇರಿ ಜಂಟಿಯಾಗಿ ಸಮೀಕ್ಷೆ ನಡೆಸಿ ಸಲ್ಲಿಸುವ ನಿಖರ ವರದಿಯನ್ನು ರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಂಬಂಧಿಸಿದ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಬೆಳೆಹಾನಿಯ ಬಗ್ಗೆ ನಿಕರವಾದ ಮಾಹಿತಿ ಸಲ್ಲಿಸಲು ಈಗಾಗಲೇ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಇದೆ ವೇಳೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು.
ಸೇತುವೆ ವೀಕ್ಷಣೆ: ತೀವ್ರ ಮಳೆಯಿಂದಾಗಿ ಹಾನಿಗೊಳಗಾದ ಸರ್ಸಿ ಎ ಗ್ರಾಮದ ಬ್ರಿಜ್ ಸ್ಥಳಕ್ಕು ಕೂಡ ಕೇಂದ್ರ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಸೇತುವೆ ದುರಸ್ತಿಗೆ ಕೂಡಲೇ ಗಮನ ಹರಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಸೆಂಟರಗೆ ಭೇಟಿ: ಸೇತುವೆ ಪರಿಶೀಲನೆ ಬಳಿಕ ಕೇಂದ್ರ ಸಚಿವರು, ಸರ್ಸಿ ಎ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಿಗಮ ಮಂಡಳಿಯ ಅಧ್ಯಕ್ಷರಾದ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಇತರರು ಇದ್ದರು.