ಕಿತ್ರೆ ದೇವಿಮನೆಯಲ್ಲಿ  ಸಾಮೂಹಿಕ ಕುಂಕುಮಾರ್ಚನೆ ಸಂಪನ್ನ 

Source: sonews | By Staff Correspondent | Published on 21st August 2019, 12:09 AM | Coastal News |

ಭಟ್ಕಳ : ತಾಲ್ಲೂಕಿನ ಮಾರುಕೇರಿಯ ಕಿತ್ರೆ ಶ್ರೀ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮಂಗಳವಾರ ಭವತಾರಿಣಿ ಸೀಮಾ ಪರಿಷತ್ ವತಿಯಿಂದ ಸಾಮೂಹಿಕ ಕುಂಕುಮಾರ್ಚನೆ ಏರ್ಪಡಿಸಲಾಗಿತ್ತು. 

ಕುಂಕುಮಾರ್ಚನೆ ಕಾರ್ಯಕ್ರಮಕ್ಕೆ ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರ ಚಾಲನೆ ನೀಡಿ ಮಾತನಾಡಿ, ವರ್ಷಂಪ್ರತಿಯಂತೆ ಈ ವರ್ಷವೂ ಸೀಮಾ ಪರಿಷತ್‍ನಿಂದ ಕುಂಕುಮಾರ್ಚನೆ ಹಮ್ಮಿಕೊಳ್ಳಲಾಗಿದೆ. ಕುಂಕುಮಾರ್ಚನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದೆಯೂ ಸಹ ಭವತಾರಿಣಿ  ಸೀಮಾ ಪರಿಷತ್ತಿನ ಬಾಂದವರಿಂದ ಇದೇ ರೀತಿಯ ಸಹಕಾರ ಇರಬೇಕೆಂದರು. ಕಾರ್ಯದರ್ಶಿ ವಿನಾಯಕ ಭಟ್ಟ ತೆಕ್ನಗೆದ್ದೆ, ಪ್ರಮುಖರಾದ ಗುರು ಉಪಾಧ್ಯಾಯ, ಗಣಪಯ್ಯ ಹೆಗಡೆ, ವಿಘ್ನೇಶ್ವರ ಉಪಾಧ್ಯಾಯ ಮುಂತಾದವರಿದ್ದರು.

ಕುಂಕುಮಾರ್ಚನೆಯಲ್ಲಿ ನೂರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದು, ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...