ಹೊಸದಿಲ್ಲಿ: ಗೋರಕ್ಷಣೆಯಲ್ಲಿ ನಡೆಯುವ ಗುಂಪು ಹತ್ಯೆಗಳು ಸಂಪೂರ್ಣ ಖಂಡನಾರ್ಹ. ಇಂತಹ ಘಟನೆಗಳು ನಾಗರಿಕ ಸಮಾಜವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಗುಂಪು ಹತ್ಯೆಗಳು ಸಂಪೂರ್ಣ ಖಂಡನಾರ್ಹ. ಇಂತಹ ಕೃತ್ಯಗಳನ್ನು ಯಾರೂ ಬೆಂಬಲಿಸಬಾರದು. ಇದು ಸಂಪೂರ್ಣ ತಪ್ಪು” ಎಂದರು.
ಗುಂಪುಹತ್ಯೆಗಳಿಂದ ದೇಶದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತ ಭಾವನೆಯಲ್ಲಿದ್ದಾರೆ ಎಂಬ ನಾಸಿರುದ್ದೀನ್ ಶಾ ಅವರ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ, “ಅಜೆಂಡಾಗಳ ಕಾರಣದಿಂದ ಕೆಲವರು ಚುನಾವಣೆಯ ಸಮಯ ಅಸುರಕ್ಷಿತ ಭಾವನೆ ಇದೆ ಎನ್ನುತ್ತಾರೆ” ಎಂದರು.
“2014ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆಯೇ ಇಂತಹ ಘಟನೆಗಳು ನಡೆಯುತ್ತಿದೆಯೇ?” ಎಂದವರು ಪ್ರಶ್ನಿಸಿದರು.