ಕುಡಿದ ನಶೆಯಲ್ಲಿ ದೋಣಿ ಕೊಂಡೊಯ್ದ. ವಾಪಸ್ ಬರಲಾಗದೇ ಗುಡ್ಡಕ್ಕೆ ಸಿಲುಕಿಕೊಂಡ.

Source: SO News | By Laxmi Tanaya | Published on 27th August 2021, 8:16 PM | Coastal News | Don't Miss |

ಕಾರವಾರ : ಇಲ್ಲಿನ ಅರಬ್ಬಿ ಸಮುದ್ರ ಸಮೀಪದ ‌ಲೈಟ್ ಹೌಸ್ ಬಳಿ ದೋಣಿಯೊಂದನ್ಮ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯೋರ್ವ ಸಿಲುಕಿಕೊಂಡ ಘಟನೆ ನಡೆದಿದೆ.

ವ್ಯಕ್ತಿಯನ್ನ ಕರಾವಳಿ ಪೊಲೀಸ್ ಪಡೆ ಸಿಬ್ಬಂದಿಗಳು ಸುರಕ್ಷಿತವಾಗಿ ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಮಹಾರಾಷ್ಟ್ರ ದ ಪನ್ವೆಲ್ ಮೂಲದ  ಸಪ್ನಲ್ ಸುರೇಶ ಯಾದವ  (21) ಎಂದು ಗುರುತಿಸಲಾಗಿದೆ.

 ಎಂಟು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಬಂದ ಈತ ಕುಡಿದ ನಶೆಯಲ್ಲಿ ಅಗಸ್ಟ್ 25 ರಂದು ಅಲಿಗದ್ದಾ ಬೀಚ್‌ನಲ್ಲಿ ನಿಲ್ಲಿಸಿಟ್ಟ “ಓಂ ಯತಾಳ “ ಎಂಬ ನಾಡ ದೋಣಿಯನ್ನು ಸದ್ದಿಲ್ಲದೆ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.

 ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಓರ್ವ ಸಿಲುಕಿಕೊಂಡಿರುವ ವಿಷಯ ತಿಳಿದ ಕರಾವಳಿ ಕಾವಲು ಪಡೆ ಪೊಲೀಸರು ಸ್ಥಳಕ್ಕೆ ‌ಧಾವಿಸಿ‌ ಆತನನ್ನ ದೋಣಿ ಸಮೇತ ಕರೆ ತಂದಿದ್ದಾರೆ. ಆಸಾಮಿಯು ವಾಪಸ್‌ ದೋಣಿಯಿಂದ ಬರಲು ಆಗದೇ ದ್ವೀಪದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...