ಕಾರವಾರ : ಇಲ್ಲಿನ ಅರಬ್ಬಿ ಸಮುದ್ರ ಸಮೀಪದ ಲೈಟ್ ಹೌಸ್ ಬಳಿ ದೋಣಿಯೊಂದನ್ಮ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯೋರ್ವ ಸಿಲುಕಿಕೊಂಡ ಘಟನೆ ನಡೆದಿದೆ.
ವ್ಯಕ್ತಿಯನ್ನ ಕರಾವಳಿ ಪೊಲೀಸ್ ಪಡೆ ಸಿಬ್ಬಂದಿಗಳು ಸುರಕ್ಷಿತವಾಗಿ ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಮಹಾರಾಷ್ಟ್ರ ದ ಪನ್ವೆಲ್ ಮೂಲದ ಸಪ್ನಲ್ ಸುರೇಶ ಯಾದವ (21) ಎಂದು ಗುರುತಿಸಲಾಗಿದೆ.
ಎಂಟು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಬಂದ ಈತ ಕುಡಿದ ನಶೆಯಲ್ಲಿ ಅಗಸ್ಟ್ 25 ರಂದು ಅಲಿಗದ್ದಾ ಬೀಚ್ನಲ್ಲಿ ನಿಲ್ಲಿಸಿಟ್ಟ “ಓಂ ಯತಾಳ “ ಎಂಬ ನಾಡ ದೋಣಿಯನ್ನು ಸದ್ದಿಲ್ಲದೆ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಓರ್ವ ಸಿಲುಕಿಕೊಂಡಿರುವ ವಿಷಯ ತಿಳಿದ ಕರಾವಳಿ ಕಾವಲು ಪಡೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನ ದೋಣಿ ಸಮೇತ ಕರೆ ತಂದಿದ್ದಾರೆ. ಆಸಾಮಿಯು ವಾಪಸ್ ದೋಣಿಯಿಂದ ಬರಲು ಆಗದೇ ದ್ವೀಪದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.