ಮುಂಡಗೋಡ: ಐಬೇಕ್ಸ್ ತಂತಿ ತಗುಲಿ ವ್ಯಕ್ತಿ ಸಾವು

Source: Nazir Tadapatri | By S O News | Published on 15th June 2021, 3:51 PM | Coastal News |

ಮುಂಡಗೋಡ: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಹೊಲಕ್ಕೆ ಹಾಕಿದ್ದ ಐಬೇಕ್ಸ್ ತಂತಿಯನ್ನು ದಾಟುವಾಗ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಉಗ್ಗಿನಕೇರಿ ಕಾಡು ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪ್ರದೀಪ ಸಿದ್ದಿ(35) ಎಂದು ಹೇಳಲಾಗಿದೆ.

ಮೃತನು ರಾತ್ರಿ ಕಾಡು ಪ್ರವೇಶಿಸಿ ಮರದ ತುಂಡನ್ನು ತರುತ್ತಿದ್ದಾಗ ಹೊಲಕ್ಕೆ ಹಾಕಿದ ಐಬೇಕ್ಸ್ ತಂತಿ ಬೇಲಿಯನ್ನು ದಾಟುವಾಗ ತಂತಿ ತಗುಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಐಬೇಕ್ಸ್ ತಂತಿ ತಗುಲಿದರೆ ಮೃತಪಡುವುದಿಲ್ಲ ಐಬೇಕ್ಸ್ ತಂತಿಗೆ ವಿದ್ಯುತ್ ಪ್ರವಹಿಸಲಾಗಿತ್ತೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸ ಇನ್ಸಪೇಕ್ಟರ ಪ್ರಭುಗೌಡ ಡಿ.ಕೆ. ಭೇಟಿನೀಡಿ ಪರಿಶೀಲಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...