ಭಟ್ಕಳ:ಸಮುದ್ರದ ಅಪಾಯಕಾರಿ ಸ್ಥಳದಲ್ಲಿ ನಿಂತು ವ್ಯಕ್ತಿನೋರ್ವ ಪೋಟೋ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಘಟನೆ ಗುರುವಾರ ಮುರುಡೇಶ್ವರದ ಕಡಲತೀರದಲ್ಲಿ ನಡೆದಿದೆ. ಅದೃಷ್ಟವಶಾತ್ ಲೈಫ್ ಗಾರ್ಡ್ ಹಾಗೂ ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.
ಸಾವಿನ ದವಡೆಯಿಂದ ಪಾರಾದ ಅನಿಲ ಕುಮಾರ ಎಸ್. ಶಂಕರಪ್ಪ ಗೌಡ ಮೈಸೂರಿನ ನಿವಾಸಿ ಎಂದು ತಿಳಿದು ಬಂದಿದ್ದು, ಈತ ತನ್ನ ನಾಲ್ಕು ಮಂದಿ ಗೆಳೆಯರೊಂದಿಗೆ ಗೋವಾದಿಂದ ಮುರ್ಡೇಶ್ವರಕ್ಕೆ ನಿನ್ನೆ ರಾತ್ರಿ ಬಂದಿದ್ದು. ಆರ್.ಎನ್.ಎಸ್. ರೆಸಿಡೆನ್ಸಿಯಲ್ಲಿ ಹೊಟೇಲನಲ್ಲಿ ತಂಗಿದ್ದು ಬೆಳಿಗ್ಗೆ 11.30 ರ ಸುಮಾರಿಗೆ ಹೋಟೆಲನಿಂದ ಚೆಕ್ ಔಟ್ ಮಾಡಿ ಹೊರಗಡೆ ಬಂದು ಅವರ ಗುಂಪಿನಲ್ಲಿರುವ ಹತ್ತಿರ ಫೋಟೋ ತೆಗೆಯಲು ಹೇಳಿ ಮೆಟ್ಟಿಲು ಹತ್ತುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.
ನೀರಿನ ಸೆಳವಿಗೆ ಸಿಲುಕಿಕೊಂಡಿದ್ದ. ತಕ್ಷಣ ಸ್ಥಳದಲ್ಲಿದ್ದವರು ಅಲ್ಲಿಯೇ ಇದ್ದ ಲೈಫ್ ಗಾರ್ಡ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.ತಕ್ಷಣ ವಿಷಯ ತಿಳಿದ ಅಲ್ಲಿನ ಜೀವ ರಕ್ಷಕ ಸಿಬ್ಬಂದಿಗಳು ಅನೀಲಕುಮಾರ್ ಅವರನ್ನು ಜೀವ ರಕ್ಷಣೆ ಮಾಡಿ. ಚಿಕಿತ್ಸೆಗಾಗಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ಯಲ್ಲಿ
ಪ್ರಥಮ ಚಿಕಿತ್ಸೆ ನೀಡಿ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದೆ.
ರಕ್ಷಣೆ ಮಾಡಿದ ಲೈಪ್ ಗಾರ್ಢ ಸಿಬ್ಬಂದಿಗಳಾದ ಚಂದ್ರಶೇಖರ ಹರಿಕಾಂತ,ಸ್ಥಳೀಯ ಮೀನುಗಾರ ಲೋಕೇಶ್ ಹರಿಕಾಂತ, ಕಟ್ಟಡ ಕಾರ್ಮಿಕ ಕೃಷ್ಣ ನಾಯ್ಕ ಬೆಳಕೆ ಕಾರ್ಯಚರಣೆ ಯಲ್ಲಿ ಉಪಸ್ಥಿತರಿದ್ದರು.