ಮಂಗಳೂರು : ಕೇಂದ್ರ ಮತ್ತು ರೈತರ ಹೋರಾಟದ ಬಗ್ಗೆ ಒಂಭತ್ತು ಸುತ್ತಿನ ಮಾತುಕತೆ ನಡೆದಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಕರ್ತರೊಂಗೆ ಮಾತನಾಡಿದ ಡಿವಿಎಸ್ , ನಾನು ಪರ್ಟಿಲೈಸರ್ ಖಾತೆಯನ್ನು ವಹಿಸಿಕೊಂಡ ನಂತರ ಕೃಷಿಕರ ರಾಸಯನಿಕ ಗೊಬ್ಬರದ ಸಮಸ್ಯೆಯನ್ನು ಬಗೆ ಹರಿಸಿದ್ದೇನೆ. ಇಂದು ಗೊಬ್ಬರ ಸಮಸ್ಯೆ ಇಲ್ಲ. ದೇಶದಲ್ಲಿ ರೈತರು ಕೃಷಿನೀತಿಯ ಬಗ್ಗೆ ಹಮ್ಮಿಕೊಂಡಂತಹ ಹೋರಾಟದ ಬಗ್ಗೆ ಪ್ರಧಾನಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದು ಸಮಸ್ಯೆಯ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದಾರೆ.
ಈಗಾಗಲೇ ರೈತರ ಸಮಸ್ಯೆಗಳನ್ನು ಬಗ್ಗೆ ಬಗೆಹರಿಸುವಲ್ಲಿ ನಮ್ಮ ಸರಕಾರ ಎಲ್ಲ ಸಹಕಾರ ನೀಡುತ್ತಿದೆ. ಎಲ್ಲಾ ಸಮಸ್ಯೆ ಬಗೆ ಹರಿಯಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.