ಶಿರಸಿ : ಕಾಡು ಪ್ರಾಣಿ ಬೇಟೆಗೆಂದು ಹಾಕಿದ ತಂತಿಯ ಉರುಳಿಗೆ ಸಿಲುಕಿ ಕಪ್ಪು ಚಿರತೆ ಸಾವನ್ನಪ್ಪಿದ ಘಟನೆ ತಾಲೂಕಿನ ಹುಳೆಮಳಗಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
ದುಷ್ಕರ್ಮಿಗಳು ಕೆಲ ದಿನಗಳ ಹಿಂದೆ ಪ್ರಾಣಿ ಬೇಟೆಗಾಗಿ ತಂತಿಯ ಉರುಳು ಹಾಕಿದ್ದರು. ಬೆಳಿಗ್ಗೆ ಕಪ್ಪು ಚಿರತೆಯೊಂದು ಉರುಳಿಗೆ ಸಿಲುಕಿ ಒದ್ದಾಡಿದೆ. ಇದನ್ನ ನೋಡಿದವರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರಿಂದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದರು.
ಜನ ಕೂಡ ಚಿರತೆ ನೋಡಲು ಮುಗಿಬಿದ್ದರು. ಒಂದೆಡೆ ಜನರನ್ನ ನಿಯಂತ್ರಿಸಲು ಅರಣ್ಯ ಸಿಬ್ಬಂದಿಗಳ ಹರಸಾಹಸ ಪಡಬೇಕಾಯಿತು. ಇನ್ನೊಂದೆಡೆ ಚಿರತೆ ರಕ್ಷಿಸಲು ಕಾರ್ಯಾಚರಣೆ ನಡೆಸಿದರಾದರೂ ಪ್ರಯೋಜನವಾಗದೆ ಚಿರತೆ ಸಾವನ್ನಪ್ಪಿದ್ದಾಗಿ ಗೊತ್ತಾಗಿದೆ.