ಸಿರಿಯ: 2 ವಾರಗಳಲ್ಲಿ 1,000 ಸಾವು; 4,800 ಗಾಯಾಳು

Source: sonews | By Staff Correspondent | Published on 9th March 2018, 11:08 PM | Global News | Don't Miss |

ಲಂಡನ್: ಸಿರಿಯದ ಬಂಡುಕೋರ ನಿಯಂತ್ರಣದ ಪೂರ್ವ ಘೌಟದಲ್ಲಿ ಕೇವಲ ಎರಡು ವಾರಗಳಲ್ಲಿ 1,000 ಮೃತದೇಹಗಳು ಮತ್ತು 4,800 ಗಾಯಾಳುಗಳನ್ನು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್‌ಎಫ್)’ನ ಬೆಂಬಲ ಹೊಂದಿರುವ ಆಸ್ಪತ್ರೆಗಳು ಸ್ವೀಕರಿಸಿರುವುದಾಗಿ ವೈದ್ಯರ ಸಂಘಟನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆದಾಗ್ಯೂ, ಫೆಬ್ರವರಿ 18ರಿಂದ ಮಾರ್ಚ್ 4ರವರೆಗಿನ ಅವಧಿಯ ಈ ಸಾವು ನೋವುಗಳ ಸಂಖ್ಯೆ ಕನಿಷ್ಠವಾಗಿದೆ ಹಾಗೂ ವಾಸ್ತವಿಕ ಸಂಖ್ಯೆ ಹೆಚ್ಚಾಗಿರಬಹುದು ಎಂದು ಅದು ಹೇಳಿದೆ.

ರಾಜಧಾನಿ ಡಮಾಸ್ಕಸ್‌ನ ಉಪನಗರ ಪೂರ್ವ ಘೌಟದಲ್ಲಿ ಎಂಎಸ್‌ಎಫ್ ಸ್ಥಾಪಿಸಿರುವ 20 ವೈದ್ಯಕೀಯ ಸಂಸ್ಥಾಪನೆಗಳ ಪೈಕಿ 15 ಬಾಂಬ್ ದಾಳಿಗಳಲ್ಲಿ ಧ್ವಂಸಗೊಂಡಿದೆ ಎಂದು ವೈದ್ಯರ ಸಂಘಟನೆ ತಿಳಿಸಿದೆ.

‘‘ತಕ್ಷಣ ಯುದ್ಧವಿರಾಮವನ್ನು ಜಾರಿಗೊಳಿಸಬೇಕು ಹಾಗೂ ಮುತ್ತಿಗೆಗೊಳಗಾಗಿರುವ ಪ್ರದೇಶದಲ್ಲಿರುವ ರೋಗಿಗಳು ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಅಲ್ಲಿಗೆ ವೈದ್ಯಕೀಯ ಪರಿಕರಗಳನ್ನು ಸಾಗಿಸಲು ಅವಕಾಶ ನೀಡಬೇಕು ಎಂಬ ತನ್ನ ಕರೆಯನ್ನು ಎಂಎಸ್‌ಎಫ್ ಪುನರುಚ್ಚರಿಸುತ್ತದೆ’’ ಎಂದು ಸಂಘಟನೆ ಹೇಳಿದೆ.

ಮತ್ತೆ 13 ನಾಗರಿಕರ ಸಾವು

ಈ ನಡುವೆ, ಪೂರ್ವ ಘೌಟದ ವಿವಿಧ ಪಟ್ಟಣಗಳ ಮೇಲೆ ಸರಕಾರಿ ಪಡೆಗಳು ಹೊಸದಾಗಿ ನಡೆಸಿದ ವೈಮಾನಿಕ ಬಾಂಬ್ ದಾಳಿಗಳಲ್ಲಿ 13ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಡಮಾಸ್ಕಸ್‌ನ ಉಪನಗರ ಪೂರ್ವ ಘೌಟದಲ್ಲಿ ಯುದ್ಧವಿರಾಮಕ್ಕೆ ಕರೆ ನೀಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿರುವ ನಿರ್ಣಯ ಇನ್ನೂ ಜಾರಿಯಾಗಿಲ್ಲ.

ಯುದ್ಧವಿರಾಮವನ್ನು ಜಾರಿಗೊಳಿಸಲು ನೆರವಾಗುವಂತೆ ಸಿರಿಯದ ಮಿತ್ರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರಿಗೆ ಪದೇ ಪದೇ ಮಾಡಿರುವ ಮನವಿಗಳು ವ್ಯರ್ಥವಾಗಿವೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...