ಝುಬೈರ್ಗೆ ಜಾಮೀನು; ನಾಗರಿಕ ಧ್ವನಿಯ ದಮನ ಸಲ್ಲ; ಸುಪ್ರೀಂ ಕೋರ್ಟ್
ಮುಹಮ್ಮದ್ ಝುಬೈರ್ ಅವರು ಟ್ವಿಟ್ ಮಾಡುವುದಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ ಉತ್ತರಪ್ರದೇಶ ಸರಕಾರ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, “ಇದು ನ್ಯಾಯವಾದಿಗಳು ವಾದ ಮಾಡಬಾರದು ಎಂದು ಹೇಳಿದಂತೆ, ಪತ್ರಕರ್ತರು ಬರೆಯಬಾರದು ಎಂದು ಹೇಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
“ಅವರು ಕಾನೂನು ಉಲ್ಲಂಘಿಸಿದರೆ ಉತ್ತರದಾಯಿಯಾಗುತ್ತಾರೆ. ಆದರೆ, ನಾಗರಿಕ ಧ್ವನಿ ಎತ್ತುವ ಸಂದರ್ಭ ಆತನ ವಿರುದ್ಧ ನಾವು ಮೊದಲೇ ಕ್ರಮಗಳನ್ನು ತೆಗೆದುಕೊಳ್ಳುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.
ಅವರನ್ನು ದಿಲ್ಲಿ ಪೊಲೀಸರು ವಿಸ್ಸತ ತನಿಖೆಗೆ ಒಳಪಡಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆದುದರಿಂದ ಅವರ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಬಂಧನದ ಅಧಿಕಾರವನ್ನು ಮಿತವಾಗಿ ಅನುಸರಿಸಬೇಕು ૨ ಎಂಬುದು ಕಾನೂನಿನ ಸ್ಥಾಪಿತ ತತ್ವವಾಗಿದೆ. ಈ ಪ್ರಕರಣದಲ್ಲಿ ಅವರನ್ನು ನಿರಂತರ ಬಂಧನದಲ್ಲಿ ಇರಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.