ಕಾರವಾರ ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಮತ್ತೆ ಆಕಸ್ಮಿಕ ಬೆಂಕಿ.
ಕಾರವಾರ : ಉತ್ತರಕನ್ನಡ ಜಿಲ್ಲಾಪಂಚಾಯತ್ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ.
ಶನಿವಾರ ಬೆಳಿಗ್ಗೆ ಇಲ್ಲಿನ ಅಭಿಲೇಖಾಲಯ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಮೂರು ಮಹಡಿಯಲ್ಲಿರುವ ವಿವಧ ಇಲಾಖೆ ಕಚೇರಿಯಲ್ಲಿನ ಕಾಗದಪತ್ರಗಳು ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ ಆಗಮಿಸಿದ್ದಾರೆ. ಅಗ್ನಿ ಅವಘಢದಿಂದಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನಿಸುತ್ತಿದ್ದಾರೆ.
ಈ ಹಿಂದೆ ಕೂಡ ಜಿ.ಪಂ ಸಿಇಓ ಅವರ ಕೊಠಡಿ ಗೆ ಬೆಂಕಿ ಬಿದ್ದಿರೋದನ್ನ ಸ್ಮರಿಸಬಹುದು.