ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹಾಡುವಳ್ಳಿ ಯುವಕ
ಭಟ್ಕಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ಯುವಕನೋರ್ವ ತನ್ನ ಅಜ್ಜಿಯ ಮನೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕೆ ಪಂಚಾಯತ್ ವ್ಯಾಪ್ತಿಯ ಗೊರ್ಟೆ ಎಂಬಲ್ಲಿ ರವಿವಾರ ನಡೆದಿದೆ.
ನೇಣುಬಿಗಿದು ತನ್ನ ಪ್ರಾಣಕಳೆದುಕೊಂಡ ಯುವಕನನ್ನು ತಾಲೂಕಿನ ಹಾಡುವಳ್ಳಿ ಪಂಚಾಯತ್ ವ್ಯಾಪ್ತಿಯ ನಾಗೊಳ್ಳಿ ನಿವಾಸಿ ನವೀನ್ ಮಾಸ್ತಪ್ಪ ನಾಯ್ಕ(18) ಎಂದು ಗುರಿತಿಸಲಾಗಿದೆ.
ಈತ ಇತ್ತಿಚೆಗೆ ನಡೆದ ದ್ವಿತೀಯಾ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ತನ್ನ ಅಜ್ಜಿ ಮನೆ ಗೊರ್ಟೆಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿರುವುದಿಲ್ಲ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.