ಭಟ್ಕಳ; ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಹುಚ್ಚು ನಾಯಿ ಕಡಿತ

Source: S O News service | By Staff Correspondent | Published on 10th September 2018, 6:46 PM | Coastal News | Don't Miss |

ಭಟ್ಕಳ: ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಹುಚ್ಚು ನಾಯಿ ಕಡಿದು ಆಸ್ಪತ್ರೆ ದಾಖಲಾದ ಘಟನೆ ಸೋಮವಾರ ತಾಲೂಕಿನ ಮುಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೂಡಭಟ್ಕಳದಲ್ಲಿ ಜರಗಿದೆ. 

ಹುಚ್ಚು ನಾಯಿ ಕಡಿತಕ್ಕೊಳಗಾದವರನ್ನು  ಮೂಡಭಟ್ಕಳದ ಸಾವಿತ್ರಿ ಕೃಷ್ಣ ನಾಯ್ಕ (40), ಲಕ್ಷ್ಮಣ ವೆಂಕಟಪ್ಪ ನಾಯ್ಕ (38), ಮುಟ್ಟಳ್ಳಿ ಗ್ರಾಮದ ಮೀನಾಕ್ಷಿ ನಾರಾಯಣ ನಾಯ್ಕ(28) ಹಾಗೂ ರಜನಿ ವೆಂಕಟರಮಣ ನಾಯ್ಕ(28) ಎಂದು ಗುರುತಿಸಲಾಗಿದೆ. 

ಹುಚ್ಚು ನಾಯಿಕಡಿತಕ್ಕೊಳಗಾದವರನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಹುಚ್ಚು ನಾಯಿ ಕಡಿತಕ್ಕೆ ಬೇಕಾದ ಚುಚ್ಚು ಮದ್ದು ಲಭ್ಯವಿಲ್ಲದ ಕಾರಣ ಹೊರಗಡೆಯಿಂದ ದುಬಾರಿ ದರದಲ್ಲಿ ಚುಚ್ಚುಮದ್ದನ್ನು ತಂದು ಚಿಕಿತ್ಸೆ ಮಾಡಲಾಯಿತು. 

ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಹುಚ್ಚು ನಾಯಿ ಕಡಿತಕ್ಕೆ ಚುಚ್ಚುಮದ್ದು ಲಭ್ಯ ಇಲ್ಲದ್ದನ್ನು ಪ್ರಶ್ನಿಸಿ ಕಡಿತಕ್ಕೊಳಗಾದ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು ಸರ್ಕಾರದಿಂದ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಚುಚ್ಚು ಮದ್ದು ಪೂರೈಕೆಯಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೊರಗಡೆ ಖಾಸಗಿ ಮೆಡಿಕಲ್ ನಲ್ಲಿ ಚುಚ್ಚು ಮದ್ದು ಲಭ್ಯವಿದ್ದರೂ ಅದು ದುಬಾರಿಯಾಗಿದ್ದು ಬಡಜನರ ಕೈಗೆ ಎಟುಕದ್ದು ಸರ್ಕಾರ ಆಸ್ಪತ್ರೆಗೆ ಚುಚ್ಚು ಮದ್ದು ಪೂರೈಕೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...