ಕೇಸರಿಪಡೆಯ ಬಣ್ಣ ಈಗ ಬಯಲಾಗುತ್ತಿದೆ-ಚಿಂತಕ ಪ್ರಕಾಶ್ ರೈ

Source: sonews | By Staff Correspondent | Published on 13th January 2018, 11:15 PM | Coastal News | State News | National News | Special Report | Don't Miss |

ಶಿರಸಿ: ಇತಿಹಾಸ ಮಾತನಾಡಲು ಸಮಯವಿಲ್ಲ. ಭವಿಷ್ಯದ ಬಗ್ಗೆ ಮಾತನಾಡಲು ಸಾಕಷ್ಟು ಸಮಯವಿದೆ. ನಾವು ಭವಿಷ್ಯದ ಬಗ್ಗೆ ಧೈರ್ಯವಾಗಿ ಮಾತನಾಡಬೇಕು. ಇಲ್ಲವಾದರೆ ನಮ್ಮ ಮೌನವೇ ನಮ್ಮನ್ನು ಕೊಲ್ಲುತ್ತದೆ ಎಂದು ಖ್ಯಾತ ನಟ ಹಾಗೂ ಚಿಂತಕ ಪ್ರಕಾಶ್ ರೈ ತಿಳಿಸಿದ್ದಾರೆ.

 ಅವರು ಶಿರಸಿಯಲ್ಲಿ ನಡೆದ ಸೌಹಾರ್ದದತ್ತ ನಡಿಗೆಹಾಗೂ ನಮ್ಮ ಸಂವಿಧಾನ ನಮ್ಮ ಹೆಮ್ಮೆ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಸರಿಪಡೆಯ ಬಣ್ಣ ಈಗ ಬಯಲಾಗುತ್ತಿದೆ. ಇವರು ನನ್ನ ದೇಶದ ಹಿಂದೂಗಳಲ್ಲ. ಕಾವಿ ಎಂದರೆ ತನಗೆ ಬಹಳ ಪ್ರೀತಿ. ಆದರೆ ಆ ಜನರೀಗ ಕಾವಿಯನ್ನು ವಿಕಾರಗೊಳಿಸಿದ್ದಾರೆ ಎಂದು ಹೇಳಿದರು.

ಹಿಂದುತ್ವದ ಪ್ರತಿಪಾದಕರು ನಿಜವಾದ ಹಿಂದೂಗಳೇ ಅಲ್ಲ. ನಿಜವಾದ ಹಿಂದೂ ಧರ್ಮದಲ್ಲಿ ಅಸಹಿಷ್ಣುತೆ ಇಲ್ಲ. ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಕ್ರಿಕೆಟ್ ಬಾಲ್  ನಲ್ಲಿ ಪುಟ್  ಬಾಲ್ ಆಡುತ್ತಾರೆ. ಇವರ ಬಣ್ಣ ಕೇಸರಿ ಅಲ್ಲ, ಅದು ಬೇರೆಯೇ ಇದೆ ಎಂದು ಪ್ರಕಾಶ್ ರೈ ಹೇಳಿದರು.

ಮನಸ್ಸಿಗೆ ಬಂದ ಹಾಗೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡುತ್ತಾರೆ. ಸಂವಿಧಾನದ ಪರಿಕಲ್ಪನೆ ಇಲ್ಲದೇ ತನ್ನ ಕಲ್ಪನೆಯಲ್ಲಿ ಹೇಳಿಕೆ ನೀಡಿ ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದರು.

ಚಿಂತಕ, ಸಂಶೋಧಕ ರಹಮತ್ ತರೀಕೆರೆ ಮಾತನಾಡಿ, ಉತ್ತರ ಕನ್ನಡದಲ್ಲಿ ಗಾಯ ಆಗಿದೆ. ರಕ್ತ ಹರಿಸಿದೆ. ಆ ಗಾಯ ಮಾಯುತ್ತಲೂ ಇದೆ. ಮತ್ತೆ ಅಂಥ ಗಾಯಗಳು ಆಗದಿರಲಿ ಎಂದು ಈ ಸಮಾವೇಶ ಆಯೋಜನೆಗೊಂಡಿದೆ. ಯಾರು ಸತ್ತರೂ ಅದು ಯಾವ ತಾಯಿಯ ಮಗು ಎಂದು ಯೋಚಿಸಬೇಕು ಹೊರತು ಯಾವ ಧರ್ಮದ್ದು ಎಂದು ಯೋಚಿಸಬಾರದು. ಆ ನಿಟ್ಟಿನಲ್ಲಿ ನಮ್ಮ ಸಮಾಜದ ಚಿಂತನೆ ರೂಪುಗೊಳ್ಳಬೇಕು ಎಂದು ಹೇಳಿದರು.

ಕೆಲವರು ರಕ್ತಸಿಕ್ತ ಭಾರತದ ಕಲ್ಪನೆಯನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ಯುದ್ಧ ಮಾಡುತ್ತಲೇ ಇರಬೇಕು, ರಕ್ತ ಹರಿಯುತ್ತಿರಬೇಕು. ತಾವು ಚುನಾವಣೆ ಗೆಲ್ಲಬೇಕು ಎಂದು ಅವರು ಬಯಸುತ್ತಾರೆ. ಆದರೆ ದೇಶದ ಜನರಿಗೊಂದು ವಿವೇಕವಿದೆ. ಈ ವಿವೇಕ ಅವರ ಬಯಕೆಗಳನ್ನು ಈಡೇರಲು ಬಿಡುವುದಿಲ್ಲ ಎಂದರು.

ನ್ಯಾಯಾಧೀಶರೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ. ಒಂದು ಹೆಣ ಬಿದ್ದರೆ ನಾವು ಗೆಲ್ಲುತ್ತೇವೆ ಅನ್ನುವ ಲೆಕ್ಕಾಚಾರದ ಜನ ಇರುವಾಗ ನಾವು ಪ್ರಜಾಪ್ರಭುತ್ವದ ಕುರಿತು ಮಾತನಾಡಬೇಕಿದೆ ಎಂದರು.

ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ನಾವು ಇಂದು ಫ್ಯಾಸಿಸಮ್ನ ಹೆಬ್ಬಾಗಿಲಲ್ಲಿ ನಿಂತಿದ್ದೇವೆ. ಫ್ಯಾಸಿಸಂ ಅಂದರೆ ಭಯ ಹುಟ್ಟಿಸುವುದು. ಭ್ರಮೆಗಳನ್ನು ಹುಟ್ಟಿಸುವುದು. ವೈರಿಗಳನ್ನು ಹುಟ್ಟಿಸಿ ಅವರ ಮನಸಿನಲ್ಲಿ ಕ್ರೌರ್ಯ ಬೆಳೆಯುವಂತೆ ಪ್ರಚೋದಿಸುವುದು. ಭಾರತದಲ್ಲಿ ಫ್ಯಾಸಿಸಮ್  ನ ವ್ಯಾಖ್ಯಾನವೆಂದರೆ, ಸಂವಿಧಾನವನ್ನು ಅಳಿಸಿ ಹಾಕುವುದು ಎಂದು ಹೇಳಿದರು.

ಇಲ್ಲಿಯ ಜನರು ಸಹಜವಾಗಿ ಜಾತ್ಯತೀತರಾಗಿದ್ದಾರೆ. ಆದರೆ ಇವರನ್ನು ಪ್ರಜ್ಞಾಪೂರ್ವಕವಾಗಿ ಕೋಮುವಾದಿಗಳನ್ನಾಗಿ ಮಾಡಲಾಗುತ್ತಿದೆ. ದುಷ್ಕರ್ಮಿಗಳು ನಾಯಕತ್ವ ವಹಿಸಿದಾಗ ಸಜ್ಜನರು ಮನೆಯಲ್ಲಿ ವಿಶ್ಲೇಷಣೆ ಮಾಡುತ್ತಾ ಕೂತಿರುತ್ತಾರೆ. ಆದ್ದರಿಂದಲೇ ಕೋಮು ಗಲಭೆಗಳಿಗೆ ಅವಕಾಶ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದರು.

ಸುದ್ದಿ ಟಿವಿಯ ಮುಖ್ಯಸ್ಥ ಶಶಿಧರ ಭಟ್ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಶೇ.90ರಷ್ಟು ಬ್ರಾಹ್ಮಣರಿದ್ದಾರೆ. ಅವರಲ್ಲಿ ಶೇ.99ರಷ್ಟು ಆರೆಸ್ಸೆಸ್  ನವರು ಇದ್ದಾರೆ. ಇವರಿಂದ ಎಂತಹ ವರದಿಗಳು ಬರುವುದೆಂದು ನಾವೇ ಊಹಿಸಬಹುದು. ಈ ದಿನದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಮಾರಕವಾಗುವುದು ಖಂಡಿತ ಎಂದರು.

ಪ್ರಮುಖರಾದ ಮುನೀರ್ ಕಾಟಿಪಳ್ಳ, ಸಾಹಿತಿ .ವಿನಯಾವಕ್ಕುಂದ ಮಾತನಾಡಿದರು.

ಗುಜರಾತ್ ಮಾದರಿ ಎನ್ನುವುದು ಬೋಗಸ್ ಆಗಿದ್ದು, ಶೇ.50ರಷ್ಟು ವಿದ್ಯಾರ್ಥಿಗಳಿಗೆ ಈಗಲೂ ಪಂಕ್ತಿ ಭೇದ ಮಾಡಲಾಗುತ್ತಿದೆ. ಯಾವುದೇ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್ ಮುಂದಿಲ್ಲ. ಗುಜರಾತ್  ನಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇಂತಹ ಗುಜರಾತ್ ಮಾದರಿ ನಮ್ಮ ದೇಶಕ್ಕೆ ಬೇಡ.  ಮಾರ್ಟಿನ್ ಮಾಕ್ವಾನ್, ಗುಜರಾತ್  ನ ಮಾನವ ಹಕ್ಕು ಹೋರಾಟಗಾರ

ಸಂವಿಧಾನವನ್ನು ಬದಲಾಯಿಸುವುದು ಅಸಾಧ್ಯ. ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಸಂವಿಧಾನವನ್ನು ಕಾಗದದ ಮೇಲೆ ಬರೆದಿಲ್ಲ, ನಮ್ಮ ಹೃದಯಗಳಲ್ಲಿ ಬರೆದಿದ್ದಾರೆ. ಸಂವಿಧಾನ ನಮ್ಮ ದೇಶದ ಬಹುದೊಡ್ಡ ಕನಸು. ಆ ಕನಸನ್ನು ಬಾಬಾಸಾಹೇಬರು ಬರೆದಿದ್ದಾರೆ. ಯಾರು ಸಾವಿರಾರು ವರ್ಷಗಳ ಕಾಲ ಕ್ರೌರ್ಯವನ್ನು, ಅವಮಾನವನ್ನು ಸಹಿಸಿಕೊಂಡು ಬಂದರೋ ಅವರನ್ನು ಮನುಷ್ಯರು ಎಂದು ಗುರುತಿಸಿರುವ ಸಂವಿಧಾನವನ್ನು ನೀವು ಏನೂ ಮಾಡಲು ಸಾಧ್ಯವಿಲ್ಲ.  ರಾಜೇಂದ್ರ ಚೆನ್ನಿ, ಚಿಂತಕ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...