ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕಆಸ್ಪತ್ರೆಗೆ ಪ್ರಥಮ ಸ್ಥಾನ

Source: sonews | By Staff Correspondent | Published on 8th July 2020, 6:56 PM | Coastal News |

ಶ್ರೀನಿವಾಸಪುರ: ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕಆಸ್ಪತ್ರೆಗೆ ಪ್ರಥಮ ಸ್ಥಾನ ದೊರೆತಿದೆಎಂದು ಸರ್ಜನ್‍ಡಾ: ರಂಗರಾವ್ ತಿಳಿಸಿದರು.

ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ವೈದ್ಯಾಧಿಕಾರಿಗಳ ದಿನಾಚರಣೆಯ ಪ್ರಯುಕ್ತ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದಡಾ. ರಂಗರಾವ್, ಆರೋಗ್ಯಇಲಾಖೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶ್ರೀನಿವಾಸಪುರಆಸ್ಪತ್ರೆರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ.  ಸಾರ್ವಜನಿಕಆಸ್ಪತ್ರೆಯಲ್ಲಿನಜನರಲ್ ಸರ್ಜರಿಯಲ್ಲಿರಾಜ್ಯಮಟ್ಟದಲ್ಲಿ 4ನೆ ಸ್ಥಾನಪಡೆದಿದ್ದು, ಮೊದಲನೆಯದಾಗಿ ವಿಕ್ಟೋರಿಯಾಆಸ್ಪತ್ರೆ, ಬೆಂಗಳೂರು, ಎರಡನೆಯದಾಗಿಜಿಲ್ಲಾಆಸ್ಪತ್ರೆ, ದಾವಣಗೆರೆ, ಹಾಗೂ ಮೂರನೆಯದಾಗಿಜಿಲ್ಲಾಆಸ್ಪತ್ರೆಚಿತ್ರದುರ್ಗಆಗಿದ್ದು, ಶ್ರೀನಿವಾಸಪುರ ಸಾರ್ವಜನಿಕಆಸ್ಪತ್ರೆ 4ನೆ ಸ್ಥಾನವನ್ನು ಪಡೆದಿದ್ದು, ತಾಲ್ಲೂಕು ಮಟ್ಟದಆಸ್ಪತ್ರೆಯಲ್ಲಿ ಶ್ರೀನಿವಾಸಪುರಕ್ಕೆ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆಎಂದು ತಿಳಿಸಿದರು.

ಒಂದು ಒಳ್ಳೆಯ ಕೆಲಸ ನಮ್ಮಆಸ್ಪತ್ರೆಯಿಂದಆಗಿದೆಎಂದರೆ, ಡಿ ನೌಕರರಿಂದ ಹಿಡಿದು, ಎ ಗ್ರೂಪ್ ಆಡಳಿತವರ್ಗದ ವೈಧ್ಯಾಧಿಕಾರಿಅವರಿಗೂ ಸೇರುತ್ತದೆ, ನನ್ನ ಬೆನ್ನು ಹಿಂದೆ ಸುಮಾರುಜನರ ಪರಿಶ್ರಮಇರುತ್ತೆ.  ಅದರಿಂದಎಲ್ಲರಿಗೂ ಈ ದಿನ ಕೃತಜ್ನ ಪೂರಕವಾದ ಧನ್ಯವಾದಗಳನ್ನು ತಿಳಿಸುತ್ತೇನೆ. ಎಲ್ಲರಿಗೂ ಭಗವಂತಆಯುರಾರೋಗ್ಯವನ್ನು ನೀಡಿಇದೆರೀತಿ ನಿಸ್ಪೃಹವಾದ ಸೇವೆಯನ್ನು ಸಾರ್ವಜನಿಕರಿಗೆ ಸಲ್ಲಿಸಿ ಶ್ರೀನಿವಾಸಪುರದಕೀರ್ತಿರಾಜ್ಯ ಮತ್ತುರಾಷ್ಟ್ರಮಟ್ಟದಲ್ಲಿ ಮೆರೆಯುವಂತೆ ಆಗಲಿ ಎಂದು ಆಶಿಸಿದರು. 

ಉತ್ತಮ ಸೇವೆ ಸಲ್ಲಿಸುತ್ತಿರುವ ಶುಶ್ರೂಕಿಯರಾದ ಶಾಂತ, ಲಿತಿಯಾ ಮತ್ತುಅನಿತಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿಡಾ:  ಗೌಸಿಯಾ ಬಾನು, ಡಾ: ಲಾವಣ್ಯ, ಸೀನಿಯರ್ ಫಾರ್ಮಸಿ ಅಧಿಕಾರಿ ನಾಗರಾಜ್, ಶುಶ್ರೂಕಿಯರಾದಕವಿತಾ,   ಸೈಯದ್, ಪ್ರಭಾವತಿ, ಸುಗುಣ, ಶಕುಂತಲ, ಸಿಂದು, ಚೈತ್ರ, ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಅಧ್ಯಕ್ಷರಾದ ಶಿವಮೂರ್ತಿ, ಕಾರ್ಯದರ್ಶಿ ನಾಗೇಶ್, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾಂಚಿ ಮಂಜುನಾಥ್, ಸದಸ್ಯರಾದಶಿವಾರೆಡ್ಡಿ, ಶಂಕರ್, ಆನಂದ್,ಮೊದಲಾದವರು ಹಾಜರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...