ಭಟ್ಕಳ: ದೇವರೆಂದರೆ ಒಬ್ಬರೆ, ಅವರು ಯಾವ ರೂಪದಲ್ಲಿ ಬೇಕಾದರೂ ಬರಲಿ. ಧರ್ಮದ ಸಾರ, ತತ್ವ, ವಿವೇಕ ಬುದ್ದಿ, ವೇದದ ತಾತ್ಪರ್ಯವನ್ನು ಬ್ರಹ್ಮ ಸೂತ್ರದಲ್ಲಿ ರಚಿಸಿ, ಎಲ್ಲರಿಗೂ ಸರಳವಾಗಿ ಅರ್ಥವಾಗಿಸುವಂತೆ ಮಾಡಿದವರು ಭಗವಾನ್ ಶ್ರೀ ವೇದವ್ಯಾಸರು ಎಂದು ಚಿತ್ರಾಪುರ ಮಠಾಧೀಶರಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜಿಯವರು ಹೇಳಿದರು.ಅವರು ಭಾನುವಾರ ಶಿರಾಲಿಯ ಚಿತ್ರಾಪುರ ಮಠದಲ್ಲಿ ಚಾತುರ್ಮಾಸ ವೃತದ ಪೂಜಾ ವಿಧಿವಿಧಾನಗಳನ್ನು ನಿರ್ವಹಿಸಿ ಆಶಿರ್ವಚನ ನೀಡಿದರು. ವೇದದ ತಾತ್ಪರ್ಯ ಜ್ಞಾನದಲ್ಲಿದೆ. ಇದನ್ನು ಬ್ರಹ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಭಗವಾನ್ ವೇದವ್ಯಾಸರ ಕೃಪೆಯಿಂದಲೆ ಇಂದು ಸರಳವಾಗಿ ಪುರಾಣ ತಿಳಿಯುವಂತಾಗಿದೆ. ಪಾಂಡವರು ಕಾಡಿನಲ್ಲಿ ಅಜ್ಞಾತವಾಸ ಅನುಭವಿಸಿದರು ಕೌರವರು ಅವರಿಗೆ ಸಿಗಬೇಕಾದ ಪಾಲನ್ನು ನೀಡಲು ಸಿದ್ಧರಿರಲಿಲ್ಲ. ಆಗ ಯುದ್ದ ನಡೆಯುವವದು ನಿಶ್ಚಿತವಿತ್ತು.. ಆದರೆ ಪಾಂಡವರಿಗೆ ಕೌರವರೊಂದಿಗೆ ಹೊರಾಡಲು ಅಸ್ತ್ರ ಬೇಕಿತ್ತು. ಇದನ್ನು ತಿಳಿದ ವೇದವ್ಯಾಸರು ಅರ್ಜನ ಯಾದಿಯಾಗಿ ಪಾಂಡವರೊಂದಿಗೆ ವಿವಿಧ ದೇವತೆಗಳನ್ನು ಪ್ರಾರ್ಥಿಸಿ ಅವರ ಅಸ್ತ್ರಗಳನ್ನು ಪಡೆಯುವಂತೆ ಮಾಡಿದ್ದಾರೆ. ವಿಲಕ್ಷಣ, ಅಲೌಕಿಕ ವಿದ್ಯೆಗಳನ್ನು ಭಗವಾನ್ ವೇದವ್ಯಾಸರು ಅವರಿಗೆ ಪ್ರಾಪ್ತಿ ಮಾಡಿದರು. ಅಂತಹ ಸಾಮಥ್ರ್ಯುವಿರುವದು ಭಗವಾನ್ ಶ್ರೀ ವೇದವ್ಯಾಸರಿಗೆ ಮಾತ್ರ.. ಇಂದು ಜಗತ್ತು ಆಪತ್ತಿನಲ್ಲಿದೆ. ಕರೊನಾ ಕಂಟಕ ಭೂಮಂಡಲವನ್ನು ಇನ್ನಿಲ್ಲದಂತೆ ಹಿಂಡುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ನಾವು ಭಗವಾನ್ ವೇದವ್ಯಾಸರನ್ನು ಏಕಾಗ್ರಚಿತ್ತದಿಂದ ಪ್ರಾರ್ಥಿಸಬೇಕಿದೆ. ತನ್ಮಯತೆ, ಏಕಾಗ್ರತೆ ಅವಶ್ಯ ಜಪ, ತಪದಲ್ಲಿ ಮಗ್ನರಾದರೆ ದೇವ-ಮಾನವರ ಸಂಭಂದ ಹತ್ತಿರವಾಗುತ್ತದೆ. ಪ್ರಾರ್ಥಿಸುವಾಗ ಅನುಸಂದಾನ, ವ್ಯವಹರಿಸುವಾಗ ಅನುಸ್ಮರಣೆ ಮಾಡಬೇಕು. ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ದೇವರ ಪೂಜೆ, ಅನುಷ್ಠಾನಗಳನ್ನು ವೀಕ್ಷಿಸುವ ಪರಿಪಾಠ ಹೆಚ್ಚುತ್ತಿದೆ. ಸಾದ್ಯವಾದಷ್ಟು ಅನುವು ಮಾಡಿಕೊಂಡು ಜಾಗೃತ ಶಕ್ತಿಯ ಅನುಭವ ಪಡೆಯಬೇಕು ಎಂದರು. ಇದೆ ಮೊದಲ ಬಾರಿಗೆ ಅಂತರ್ಜಾಲದಲ್ಲಿ ಶ್ರೀ ಗುರುಗಳ ಚಾತುರ್ಮಾಸ ವೃತದ ಪೂಜಾ ವಿಧಿವಿಧಾನಗಳನ್ನು ಮಠದ ಕಾರ್ಯಕ್ರಮಗಳನ್ನು ದೂರದ ಊರಿನಲ್ಲಿ ಸಹಸ್ರಾರು ಭಕ್ತರು ವೀಕ್ಷಣೆ ಮಾಡಿದರು.ಮಠದ ಮ್ಯಾನೆಜರ ನಾರಾಯಣ ಮಲ್ಲಾಪುರ ಹಾಗೂ ಮಠದ ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಆಚರಿಸಲಾಯಿತು.