ಶಿರಸಿ: ಕೋವೀಡ್-19 ಸಂದರ್ಭದಲ್ಲಿ ಕೋರೋನಾ ವೈರಸ್ನಿಂದ ಕರ್ನಾಟಕ ರಾಜ್ಯದಲ್ಲಿ 32 ವಕೀಲರು ಮೃತವಾಗಿದ್ದು, ಮೃತರ ಕುಟುಂಬಕ್ಕೆ ವಿಶೇಷ ಅನುದಾನ ಇಂದಿನವರೆಗೂ ರೂಪಿಸದಿರುವುದು ವಿಷಾದಕರ ಎಂದು ಸ್ಪಂಧನಾ ಲಿಗಲ್ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ರವೀಂದ್ರ ನಾಯ್ಕ ಹೇಳಿದ್ದಾರೆ.
ವಿವಿಧ ಹಂತದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಮಾನದಂಡದ ಅಡಿಯಲ್ಲಿ ಹಾಗೂ ಇತ್ತಿಚಿಗೆÀ ವೃತ್ತಿ ಪ್ರಾರಂಭಿಸಿದ ಮಹಿಳೆಯರಿಗೆ ರಾಜ್ಯ ವಕೀಲ ಪರಿಷತ್ತ 5 ಸಾವಿರ ಅನುದಾನ, ಚಿಕಿತ್ಸೆಗೆ 50 ಸಾವಿರದ ವರೆಗೆ ಜೀವವಿಮೆ ಸೌಲಭ್ಯ ಒದಗಿಸಿದ್ದು ಇರುತ್ತದೆ. ಅವಶ್ಯಕ ಹಣಕಾಸು ನೆರವು ವಕೀಲರ ವಯಕ್ತಿಕ ವೆಲ್ಫೆರ್ಫಂಡ್ನಿಂದ ನೀಡಲು ಅವಕಾಶ ನೀಡಿದಾಗಿಯೂ, ರಾಜ್ಯ ಸರಕಾರ ರಾಜ್ಯ ವಕೀಲ ಪರಿಷತ್ತಿಗೆ 5 ಕೋಟಿ ವಕೀಲರಿಗೆ ಆರ್ಥೀಕ ಸಹಾಯ ಘೋಷಿಸಿದರೂ, ನಿರ್ದಿಷ್ಟವಾಗಿ ಕೋರೋನಾ ವೈರಸ್ನಿಂದ ಸಾವು ಉಂಟಾಗಿರುವ ವಕೀಲರ ಸಂತ್ರಸ್ಥ ಕುಟುಂಬಕ್ಕೆ ವಿಶೇಷ ಆರ್ಥಿಕ ಅನುದಾನ ಒದಗಿಸುವ ಕಾರ್ಯವಾಗಬೇಕಾಗಿರುವುದು ಅತೀ ಅವಶ್ಯ ಎಂದು ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.
ಇಗಾಗಲೇ ರಾಜ್ಯಾದ್ಯಂತ ಕೋರೋನಾ ವೈರಸ್ನಿಂದ ಅತೀ ಹೆಚ್ಚು 7 ವಕೀಲರು ಮೃತರಾಗಿರುವುದು ಬೆಳಗಾಂ ಜಿಲ್ಲೆಯಲ್ಲಿ ಆಗಿದ್ದು, ಇನ್ನುಳಿದ ಮೃತ ವಕೀಲರು 11 ಜಿಲ್ಲೆಗೆ ಸೀಮಿತವಾಗಿದ್ದವರಾಗಿರುತ್ತಾರೆ ಎಂದು ತಿಳಿಸಿದ್ದಾರೆ.