ಕೊರೋನಾ ಸೋಂಕಿನಿಂದ ಮೃತಪಟ್ಟ ರಾಜ್ಯದ 32 ವಕೀಲರ ಕುಟುಂಬಕ್ಕೆ ವಿಶೇಷ ಅನುದಾನ ನೀಡುವಂತೆ ಆಗ್ರಹ

Source: sonews | By Staff Correspondent | Published on 6th September 2020, 10:17 PM | Coastal News |

ಶಿರಸಿ: ಕೋವೀಡ್-19 ಸಂದರ್ಭದಲ್ಲಿ ಕೋರೋನಾ ವೈರಸ್‍ನಿಂದ ಕರ್ನಾಟಕ ರಾಜ್ಯದಲ್ಲಿ 32 ವಕೀಲರು ಮೃತವಾಗಿದ್ದು, ಮೃತರ ಕುಟುಂಬಕ್ಕೆ ವಿಶೇಷ ಅನುದಾನ ಇಂದಿನವರೆಗೂ ರೂಪಿಸದಿರುವುದು ವಿಷಾದಕರ ಎಂದು ಸ್ಪಂಧನಾ ಲಿಗಲ್ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ರವೀಂದ್ರ ನಾಯ್ಕ ಹೇಳಿದ್ದಾರೆ.

ವಿವಿಧ ಹಂತದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಮಾನದಂಡದ ಅಡಿಯಲ್ಲಿ ಹಾಗೂ ಇತ್ತಿಚಿಗೆÀ ವೃತ್ತಿ ಪ್ರಾರಂಭಿಸಿದ ಮಹಿಳೆಯರಿಗೆ ರಾಜ್ಯ ವಕೀಲ ಪರಿಷತ್ತ 5 ಸಾವಿರ ಅನುದಾನ, ಚಿಕಿತ್ಸೆಗೆ 50 ಸಾವಿರದ ವರೆಗೆ ಜೀವವಿಮೆ ಸೌಲಭ್ಯ ಒದಗಿಸಿದ್ದು ಇರುತ್ತದೆ. ಅವಶ್ಯಕ ಹಣಕಾಸು ನೆರವು ವಕೀಲರ ವಯಕ್ತಿಕ ವೆಲ್‍ಫೆರ್‍ಫಂಡ್‍ನಿಂದ ನೀಡಲು ಅವಕಾಶ ನೀಡಿದಾಗಿಯೂ, ರಾಜ್ಯ ಸರಕಾರ ರಾಜ್ಯ ವಕೀಲ ಪರಿಷತ್ತಿಗೆ 5 ಕೋಟಿ ವಕೀಲರಿಗೆ ಆರ್ಥೀಕ ಸಹಾಯ ಘೋಷಿಸಿದರೂ, ನಿರ್ದಿಷ್ಟವಾಗಿ ಕೋರೋನಾ ವೈರಸ್‍ನಿಂದ ಸಾವು ಉಂಟಾಗಿರುವ ವಕೀಲರ ಸಂತ್ರಸ್ಥ ಕುಟುಂಬಕ್ಕೆ ವಿಶೇಷ ಆರ್ಥಿಕ ಅನುದಾನ ಒದಗಿಸುವ ಕಾರ್ಯವಾಗಬೇಕಾಗಿರುವುದು ಅತೀ ಅವಶ್ಯ ಎಂದು ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.

ಇಗಾಗಲೇ ರಾಜ್ಯಾದ್ಯಂತ ಕೋರೋನಾ ವೈರಸ್‍ನಿಂದ ಅತೀ ಹೆಚ್ಚು 7 ವಕೀಲರು ಮೃತರಾಗಿರುವುದು ಬೆಳಗಾಂ ಜಿಲ್ಲೆಯಲ್ಲಿ ಆಗಿದ್ದು, ಇನ್ನುಳಿದ ಮೃತ ವಕೀಲರು 11 ಜಿಲ್ಲೆಗೆ ಸೀಮಿತವಾಗಿದ್ದವರಾಗಿರುತ್ತಾರೆ ಎಂದು ತಿಳಿಸಿದ್ದಾರೆ.


 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...