ಭಟ್ಕಳದಲ್ಲಿ ಮಳೆಗಾಳಿಗೆ 6 ಮನೆಗಳಿಗೆ ಹಾನಿ 

Source: S O News service | By I.G. Bhatkali | Published on 20th June 2021, 12:40 AM | Coastal News | Don't Miss |

ಭಟ್ಕಳ: ತಾಲೂಕಿನಲ್ಲಿ ಮುಂಗಾರು ಬಿರುಸುಗೊಂಡಿದ್ದು, ಶನಿವಾರ ಮಳೆಗಾಳಿಗೆ ತಾಲೂಕಿನ ವಿವಿದೆಡೆ 6 ಮನೆಗಳಿಗೆ ಹಾನಿಯಾಗಿದೆ.

ಹಾನಿಗೊಳಗಾದ ಮನೆಯ ಮಾಲಕರನ್ನು ಕೈಕಿಣಿಯ ನಫೀಸಾ ಅಬ್ಬಾಸ್ ಶೇಕ್, ಬೆಂಗ್ರೆಯ ಈರಮ್ಮ ಮಾದೇವ ನಾಯ್ಕ, ಲಕ್ಷ್ಮೀ ರಾಮಕೃಷ್ಣ ನಾಯ್ಕ, ಗಣಪತಿ ಮಂಜಪ್ಪ ನಾಯ್ಕ, ತಾರಾ ಮಾವಳ್ಳಿಯ ರಾಮಾ ಬಾಕಡ್ ಎಂದು ಗುರುತಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ತಾಲೂಕಿನ ವಿವಿದೆಡೆ ಹಲವು ರಸ್ತೆಗಳು ಹಾನಿಗೀಡಾಗಿದ್ದು, ವಾಹನ ಸವಾರರಿಗೆ ಸಂಷ್ಟ ಎದುರಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆ 8 ಗಂಟೆಯವರೆಗಿನ ಅವಧಿಯಲ್ಲಿ 30ಮಿಮೀ. ಮಳೆ ದಾಖಲಾಗಿದ್ದು, ಒಟ್ಟೂ ಮಳೆಯ ಪ್ರಮಾಣ 1268.8ಮಿಮೀ.ಗೆ ಏರಿಕೆ ಕಂಡಿದೆ. ಶನಿವಾರ ರಾತ್ರಿಯೂ ಮಳೆ ಮುಂದುವರೆದಿದ್ದು, ಕಟ್ಟೆಚ್ಚರ ವಹಿಸಲಾಗಿದೆ. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...