ಭಟ್ಕಳ: ತಾಲೂಕಿನಲ್ಲಿ ಮುಂಗಾರು ಬಿರುಸುಗೊಂಡಿದ್ದು, ಶನಿವಾರ ಮಳೆಗಾಳಿಗೆ ತಾಲೂಕಿನ ವಿವಿದೆಡೆ 6 ಮನೆಗಳಿಗೆ ಹಾನಿಯಾಗಿದೆ.
ಹಾನಿಗೊಳಗಾದ ಮನೆಯ ಮಾಲಕರನ್ನು ಕೈಕಿಣಿಯ ನಫೀಸಾ ಅಬ್ಬಾಸ್ ಶೇಕ್, ಬೆಂಗ್ರೆಯ ಈರಮ್ಮ ಮಾದೇವ ನಾಯ್ಕ, ಲಕ್ಷ್ಮೀ ರಾಮಕೃಷ್ಣ ನಾಯ್ಕ, ಗಣಪತಿ ಮಂಜಪ್ಪ ನಾಯ್ಕ, ತಾರಾ ಮಾವಳ್ಳಿಯ ರಾಮಾ ಬಾಕಡ್ ಎಂದು ಗುರುತಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ತಾಲೂಕಿನ ವಿವಿದೆಡೆ ಹಲವು ರಸ್ತೆಗಳು ಹಾನಿಗೀಡಾಗಿದ್ದು, ವಾಹನ ಸವಾರರಿಗೆ ಸಂಷ್ಟ ಎದುರಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆ 8 ಗಂಟೆಯವರೆಗಿನ ಅವಧಿಯಲ್ಲಿ 30ಮಿಮೀ. ಮಳೆ ದಾಖಲಾಗಿದ್ದು, ಒಟ್ಟೂ ಮಳೆಯ ಪ್ರಮಾಣ 1268.8ಮಿಮೀ.ಗೆ ಏರಿಕೆ ಕಂಡಿದೆ. ಶನಿವಾರ ರಾತ್ರಿಯೂ ಮಳೆ ಮುಂದುವರೆದಿದ್ದು, ಕಟ್ಟೆಚ್ಚರ ವಹಿಸಲಾಗಿದೆ.