ಎಸ್.ಐ.ಓ ದಿಂದ ‘ಅರಿವಿನ ನಾಳೆಗಾಗಿ’ ಜಾಥಾ

Source: sonews | By Staff Correspondent | Published on 10th October 2018, 11:37 PM | Coastal News | Don't Miss |

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಇದರ ಕರ್ನಾಟಕ ಘಟಕದ ವತಿಯಿಂದ ‘ಅರಿವಿನ ನಾಳೆಗಾಗಿ’ ದಕ್ಷಿಣ ಕರ್ನಾಟಕ ಕಾರವಾನ (ಜಾಥಾ) ಕಾರ್ಯಕ್ರಮವು ಬುಧವಾರ ನಗರದಲ್ಲಿ ಜರುಗಿತು.

ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ರ್ಯಾಲಿಯನ್ನು ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯಾಧ್ಯಕ್ಷ ಅತಾರುಲ್ಲಾ ಶರೀಫ್ ಉದ್ಘಾಟಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರಿವನ್ನು ಗಳಿಸಲು ಅಜ್ಞಾನವನ್ನು ಎದುರಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ ಎಸ್‌ಐಒ ‘ಅರಿವಿನ ನಾಳೆಗಾಗಿ’ ಎಂಬ ಧ್ಯೇಯವಿಟ್ಟುಕೊಂಡು ಹಮ್ಮಿಕೊಂಡ ಕಾರವಾನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಮಾಜದಲ್ಲಿ ಒಂದು ಗುಂಪು ಕೆಡುಕನ್ನು ಪಸರಿಸುತ್ತ ಮುಂದುವರಿಯುತ್ತದೆ, ಇನ್ನೊಂದು ಗುಂಪು ಸುಮ್ಮನೆ ನಿಂತು ವೀಕ್ಷಿಸುತ್ತದೆ. ಆದರೆ ಮೂರನ್ನೇ ಗುಂಪು ತಮ್ಮ ಒಳಿತಿನಿಂದ ಕೆಡಕನ್ನು ತಡೆಯಲು ನಿರಂತರ ಪ್ರಯತ್ನದಲ್ಲಿ ತೊಡಗುತ್ತದೆ. ಒಳಿತನ್ನು ಪಸರಿಸುವ ಕೆಡುಕನ್ನು ತಡೆಯುವವರು ನಾವಾಗಬೇಕು ಎಂದು ಅತಾರುಲ್ಲಾ ಶರೀಫ್ ಅಭಿಪ್ರಾಯಪಟ್ಟರು.

ಎಸ್‌ಐಒ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಅಝರುದ್ದೀನ್ ಮಾತನಾಡಿ, ಮುಸ್ಲಿಮರು ಈ ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಈ ಮಧ್ಯೆ ಭಾರತದಲ್ಲಿ ಸಮುದಾಯದ ಮೇಲೆ ಶೋಷಣೆ ಮೀತಿ ಮೀರಿದೆ. ಈ ಕೊಡುಗೆಗಳನ್ನು ದೇಶದ ನಾಗರಿಕರಿಗೆ ನೆನಪಿಸುತ್ತಾ ಇನ್ನಷ್ಟು ಕೊಡುಗೆಗಳನ್ನು ನೀಡಬೇಕಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅವಿವೇಕ ಬಹುತೇಕ ರಂಗದ ಬಂಡವಾಳವಾಗಿದೆ. ವಿವೇಕದ ಪಾಠ ಕಲಿಸಿ ಕೊಡುವ ಕೆಲಸವಾಗಬೇಕಿದೆ.ಅದರೊಂದಿಗೆ ವಿವೇಕವನ್ನು ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.

ಇಂದು ಸಮಾಜ ಭ್ರಮೆಗಳ ಸುತ್ತ ಸುತ್ತುತ್ತಿದೆ. ನಾವು ಭರವಸೆಯ ದಿನಗಳ ಕನಸು ಕಾಣುವವರಾಗಬೇಕು. ಸಮಾಜದ ಉನ್ನತಿಗೆ ಶ್ರಮಿಸಬೇಕೆಂದ ಮುಹಮ್ಮದ್ ಕುಂಞಿ, ಮೌಲ್ಯವಿಲ್ಲದ ಸಮುದಾಯಕ್ಕೆ ಯಾವುದೇ ಬೆಲೆಯಿಲ್ಲ. ಈ ಸಮಾಜದಲ್ಲಿ ಧಾರ್ಮಿಕ ಚಿಂತನೆಗಳನ್ನು ವ್ಯಾಪಕಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂವೇದನಾ ಉಡುಪಿಯ ಕಾರ್ಯಕರ್ತರು ಇಮ್ತಿಯಾಝ್ ಬೇಗ್ ನೇತೃತ್ವದಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಕೆ.ಅಶ್ರಫ್, ದ.ಕ.ಜಿಲ್ಲಾಧ್ಯಕ್ಷ ಅಮೀನ್ ಅಹ್ಸನ್, ಎಸ್‌ಐಒ ರಾಜ್ಯ ಸಲಹಾ ಸಮಿತಿ ಸದಸ್ಯ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

ರ್ಯಾಲಿಯ ಮೇಲ್ವಿಚಾರಕ ಸೈಯದ್ ಝಾಹಿದ್ ಪ್ರಾಸ್ತಾವಿಸಿದರು. ಡ್ಯಾನಿಶ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...