ಹೊನ್ನಾವರ: ಶರಾವತಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಮಂಕಿಯ ರಾಜು ಎಂ.ನಾಯ್ಕ, ಉಪಾಧ್ಯಕ್ಷರಾಗಿ ಉದ್ಯಮಿ ರಾಜೇಶ ಸಾಲೆಹಿತ್ತಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫೆಬ್ರುವರಿ 9ರಂದು ನಡೆದ ಚುನಾವಣೆಯಲ್ಲಿ 14 ಮಂದಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದರಿಂದ ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದೆ.
ಈ ಸಂದರ್ಭದಲ್ಲಿ ಸುಧಾಕರ ನಾಯ್ಕ, ಕೃಷ್ಣ ನಾಯ್ಕ, ಉಲ್ಲಾಸ ನಾಯ್ಕ, ಬಾಳ ನಾಯ್ಕ, ಪ್ರಶಾಂತ ನಾಯ್ಕ, ಮೋಹನ ನಾಯ್ಕ, ಪರಮೇಶ್ವರ ನಾಯ್ಕ, ನಾರಾಯಣ ನಾಯ್ಕ, ಮಂಜುನಾಥ ನಾಯ್ಕ, ರಾಘವೇಂದ್ರ ಹೊನ್ನಾವರ, ಶಾಂತಾ ನಾಯ್ಕ, ಸುಚಿತ್ರಾ ನಾಯ್ಕ ಉಪಸ್ಥಿತರಿದ್ದರು.