ಮತಗಟ್ಟೆ ಅಧಿಕಾರಿಗಳಿಗೆ 2ನೇ ಹಂತದ ತರಬೇತಿ

Source: so news | By MV Bhatkal | Published on 17th April 2019, 7:56 AM | Coastal News | Don't Miss |

ಭಟ್ಕಳ: ಲೋಕಸಭಾ ಚುನಾವಣೆಯ ಪ್ರಯುಕ್ತ ಲೋಕಸಭಾ ಕ್ಷೇತ್ರದ 11 ತಾಲೂಕಾ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಹಾಗೂ ಬಿರುಸಿನ ತಯಾರಿಯೂ ಮಂಗಳವಾರದಂದು ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಶಾಲಾ ಆವರಣದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅವರ ನೇತೃತ್ವದಲ್ಲಿ ನಡೆಯಿತು. 
ಜಿಲ್ಲೆಯಲ್ಲಿ ಎಪ್ರಿಲ್ 23ರಂದು ಕೆನರಾ ಕ್ಷೇತ್ರದ ಸಂಸತ್ ಚುನಾವಣೆಯು ನಡೆಯಲಿದ್ದು ಈಗಾಗಲೇ ಅಗತ್ಯದ ಸಿಬ್ಬಂದಿಗಳ ನೇಮಕವಾಗಿ ಮೊದಲ ಹಂತದ ತರಬೇತಿ ಕಾರ್ಯದ ಬಳಿಕ ಚುನಾವಣಾ ಕರ್ತವ್ಯದ ಕುರಿತು ಹಾಗೂ ಮತಯಂತ್ರ ಮತ್ತು ವಿ.ವಿ. ಪ್ಯಾಟ್ ಕುರಿತು ಮಾಹಿತಿ ನೀಡಲಾಗಿತ್ತು.
ಮಂಗಳವಾರದಂದು ಬೆಳಿಗ್ಗೆ 8 ಗಂಟೆಗೆ ಎರಡನೇ ಹಂತದಲ್ಲಿ ಮತಯಂತ್ರ ಮತ್ತು ವಿ.ವಿ. ಪ್ಯಾಟ್ ಕುರಿತು ಮಾಹಿತಿ ನೀಡುವುದರೊಂದಿಗೆ ಮತಗಟ್ಟೆಯಲ್ಲಿ ಚುನಾವಣೆ ದಿನದಂದು ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮದ ಬಗ್ಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗದ ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ವಿವರಿಸಿದರು. 
25 ಕೊಠಡಿಯಲ್ಲಿ 3 ಬ್ಲಾಕಗಳಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗದ ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ, ತಹಸೀಲ್ದಾರ ಎನ.ಬಿ.ಪಾಟೀಲ್ ಸೇರಿದಂತೆ ಸೇಕ್ಟರ ಆಫೀಸರ್ಸಗಳು ತರಬೇತಿಯನ್ನು ನೀಡಿದರು.
ತರಬೇತಿಯಲ್ಲಿ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಮುಂಡಗೋಡ, ಜೋಯಿಡಾ, ಯಲ್ಲಾಪುರ, ಹಳಿಯಾಳ ತಾಲೂಕುಗಳಿಂದ ಒಟ್ಟೂ 1096 ಪೋಲಿಂಗ್ ಅಧಿಕಾರಿಗಳು ಪಾಲ್ಗೊಂಡಿದ್ದು ಎಲ್ಲರನ್ನು 274 ತಂಡವನ್ನು ರಚಿಸಿ ಒಂದು ಕೊಠಡಿಯಲ್ಲಿ 4 ಸೇಕ್ಟರ ಆಫೀಸರ್ಸಗಳು ತರಬೇತಿಯನ್ನು ನೀಡಿದ್ದಾರೆ. 1 ಬ್ಲಾಕ್‍ನಲ್ಲಿ 11 ಕೊಠಡಿಯಂತೆ 32 ಜನ, 2 ಬ್ಲಾಕನಲ್ಲಿ 11 ಕೊಠಡಿಯಂತೆ 52 ಜನ ಹಾಗೂ 3 ಬ್ಲಾಕ್‍ನಲ್ಲಿ 3 ಕೊಠಡಿಯಂತೆ 182 ಜನ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಕಾರ್ಯ ನೀಡಲಾಯಿತು. 
ಏಪ್ರಿಲ್ 22 ರಂದು ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರ ಹಾಗೂ ವಿವಿಪ್ಯಾಟ್ ನೀಡಲಾಗುವದು ಹಾಗೂ ಎಲ್ಲಾ ಅಧಿಕಾರಿಗಳಿಗೆ ಮತಗಟ್ಟೆಗೆ ತೆರಳುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅಧಿಕಾರಿಗಳು ತಿಳಿಸಿದರು. 
ಈ ಸಂದರ್ಬದಲ್ಲಿ ಹೊನ್ನಾವರ ತಹಸೀಲ್ದಾರ ಮಂಜುಳಾ ಭಜಂತ್ರಿ, ಚುನಾವಣಾ ಶಿರಶೇದ್ದಾರ ಸಂತೋಷ ಭಂಡಾರಿ, ಸಹಾಯಕ ಆಯುಕ್ತರ ಕಛೇರಿ ಶಿರಸೇಲ್ದಾರ ಎಲ್.ಎ.ಭಟ್ಟ ಹೊನ್ನಾವರ ಕಛೇರಿ ಸಿಬ್ಬಂದಿಗಳು, ತಾಲೂಕಾ ಕಛೇರಿ ಸಿಬ್ಬಂದಿಗಳು ಭಟ್ಕಳ-ಹೊನ್ನಾವರ ಭೂಮಾಪನಾ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.  
ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಹಾಗೂ ಅಂಬ್ಯುಲೆನ್ಸ ಸೇವೆ ಕಲ್ಪಿಸಲಾಗಿತ್ತು.
ತರಬೇತಿಗೆ ಹಾಜರಾದ ಲಘು ಉಪಹಾರ, ಮಧ್ಯಾಹ್ನ ವೇಳೆ ಊಟ ಹಾಗೂ ಸಂಜೆ ಚಹಾ ವ್ಯವಸ್ಥೆಯೊಂದಿಗೆ ಅಚ್ಚುಕಟ್ಟಾಗಿ ಕಲ್ಪಿಸಲಾಯಿತು. 

​​​

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...