ಭಟ್ಕಳ: ಮಳೆಗಾಳಿಯಿಂದ ಗುರುವಾರ ಮುಂಜಾನೆ ನಸುಕಿನ ವೇಳೆ ತಾಲೂಕಿನ ಜಾಲಿಯ ಮೆಹರೂನ್ ಎಂಬುವವರ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಇದರ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಸಂತ್ರಸ್ತರಿಗೆ ನೆರವು ನೀಡಿದರು.
ಹಾರಿ ಹೋದ ಮನೆಯ ಮೇಲ್ಛಾವಣಿ ಸರಿಪಡಿಸಲು ಹೆಗಲು ಕೊಟ್ಟಿದ್ದಲ್ಲದೇ, ಮನೆಯನ್ನು ಸ್ವಚ್ಛಗೊಳಿಸಲು ನೆರವಾದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಮುಖಂಡರಾದ ವಸೀಮ್ ಮನೇಗಾರ್, ಆಕೀಫ್ ಗವಾಯಿ, ರುಮಾನ್ ಶೇಕ್, ಜಮಾನ್ ಮೊದಲಾದವರು ಉಪಸ್ಥಿತರಿದ್ದರು.