ಮಂಗಳೂರು: ಪಿಎಫ್ಐ, ಎಸ್ಡಿಪಿಐ-ಬಿಜೆಪಿಯ 'ಬಿ' ಟೀಂ. ಅವರನ್ನು ಬೆಳೆಸುತ್ತಿರುವುದೇ ಬಿಜೆಪಿ.: ಈ ಸಂಘಟನೆಗಳ ನಿಷೇಧಕ್ಕೆ ಸಾಕಷ್ಟು ಸಾಕ್ಷ್ಯ ಇದೆ ಎಂದು ಸ್ವತಃ ಮುಖ್ಯಮಂತ್ರಿ, ಗೃಹ ಸಚಿವರೇ ಹೇಳಿದ್ದಾರೆ. ಹಾಗಿದ್ದರೆ ಮೊದಲು ಈ ಸಂಘಟನೆಗೆ ಳನ್ನು ನಿಷೇಧ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಘಟಕದಿಂದ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ 'ಭಾವೈಕ್ಯತಾ ಸಮಾವೇಶ'ದಲ್ಲಿ ಹಾಗೂ ಸುದ್ದಿಗಾರರ ಜತೆಗೆ ಮಾತನಾಡಿ ಸಿದ್ದರಾಮಯ್ಯ ಈ ಆಗ್ರಹ ಮಾಡಿದರು.
ಸಂವಿಧಾನಾತ್ಮಕವಾಗಿದೆ ಮೀಸಲು ಕೇಳುವುದು ತಪ್ಪಲ್ಲ: ಸಿದ್ದು ಯಾವುದೇ ಸಮುದಾಯದವರು ಮಿಸ ಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಸಂವಿಧಾನಾತ್ಮ ಕವಾಗಿ ಅರ್ಹತೆ ಇರುವ ವರಿಗೆ ಮಾತ್ರ ಮೀಸಲಾತಿ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇಲ್ಲಿ ಸುದ್ದಿಗಾರರ ಜತೆ ಮಾತనాడి, ಮೀಸಲಾತಿ ಬಗೆ ಹಿಂದುಳಿದ ವರ್ಗಗಳ ಆಯೋಗ ಪರಿಶೀಲಿಸಿ ಶಿಫಾ ರಸು ಮಾಡಬೇಕು, ಹೊಸ ಸೇರ್ಪಡೆ ಮತ್ತು ಜಾತಿಗೆಳನ್ನು ಕೈಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡ ಬೇಕು, ನಂತರ ಸರ್ಕಾರ ತೀರ್ಮಾನಿಸಲಿ ಎಂದರು. |
ಎಸ್ಡಿಪಿಐ, ಪಿಎಫ್ಐನವರು ಬಿಜೆಪಿಗೆ ಹಿಂಬಾಗಿಲಿಂದ ಸಹಾಯ ಮಾಡುವವರು, ಬೆಂಗಳೂರಿನ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಯಲ್ಲಿ ಈ ಸಂಘಟನೆಗಳ ಕೈವಾಡ ಇದೆ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವರೇ ಬಹಿರಂಗ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಇತ್ತೀಚೆಗೆ ಪಿಎಫ್ಐಗೆ ರೇಲಿ ಮಾಡಲು ಬಿಜೆಪಿಯವರೇ ಅನುಮತಿ ನೀಡಿದ್ದಾರೆ. ಎಲ್ಲ ಕಡೆಯಲ್ಲೂ ಬಿಜೆಪಿಯವರೇ ಇರುವಾಗ, ನಿಷೇಧಕ್ಕೆ ಸಾಕಷ್ಟು ಸಾಕ್ಷ್ಯವೂ ಇರುವಾಗ ಬ್ಯಾನ್ ಮಾಡಲು ಏನು ತೊಂದರೆ ಎಂದರು.
ಬಿಜೆಪಿಗೆ ಮಾತ್ರ ಲಾಭ: ಕಳೆದ ಚುನಾವಣೆಯಲ್ಲಿ ಬಿಹಾರದಲ್ಲಿ ಎಂಐಎಂ ಪಕ್ಷದವರು ಸ್ಪರ್ಧಿಸಿ ಮುಸ್ಲಿಮರ ಓಟು ಪಡೆದರು. ಆದರೆ, ಇದರಿಂದ ಲಾಭವಾಗಿದ್ದು ಮಾತ್ರ ಬಿಜೆಪಿಗೆ, ಕರ್ನಾಟಕದಲ್ಲೂ ಪಿಎಫ್ಐ, ಎಸ್ಡಿಪಿಐ ಮೂಲಕ ಬಿಜೆಪಿ ಓಟು ಪಡೆಯುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಎಸ್ಡಿಪಿಐ, ಪಿಎಫ್ಐ, ಎಂಐಎಂ ಮಾತು ಕೇಳಬೇಡಿ ಎಂದರು.
ಆರೆಸ್ಸೆಸ್ ಜಾತಿ ಸಂಘಟನೆ: ಆರೆಸ್ಸೆಸ್ ಎನ್ನುವುದು ಜಾತಿ `ಸಂಘಟನೆ. ಅವರು ತಾವು ದೇಶ ಪ್ರೇಮಿಗಳು ಅಂತಾರೆ. ಹಾಗಿದ್ದರೆ ಸ್ವಾತಂತ್ರ ಹೋರಾಟಕ್ಕೆ ಅವರ ಕೊಡುಗೆ ಏನು? ಆರೆಸ್ಸೆಸ್ನಿಂದ ಯಾರೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ನಮ್ಮ ಊರಿನ ರಾಮ ಮಂದಿರಕ್ಕೆ ಹಣಕೊಟೆ ಆಗಲ್ವಾ?: ಸಿದ್ದು ನಾನು ಅಯೋಧ್ಯೆ ರಾಮಮಂದಿರಕ್ಕೆ ಹಣ ಕೊಡಲ್ಲ, ನಮ್ಮೂರ ರಾಮನೂದಶರಥನಮಗನೇ, ನಮ್ಮೂರರಾಮನಿಗೆ ಹಣ ಕೊಟ್ರೆ ಆಗಲ್ವಾ ಎಂದು ಪ್ರತಿಪಕ್ಷನಾಯಕ ಸಿದ್ದ ರಾಮಯ್ಯ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ನಿಂದ ಉಡುಪಿ ಜಿಲ್ಲೆಯ ದಕ್ಷಿಣದ ಹೆಜಮಾಡಿ ಗಡಿಯಿಂದ ಉತ್ತರದ ಬೈಂದೂರು ಗಡಿವರೆಗೆ 6 ದಿನಗಳ 108 ಕಿ.ಮೀ. ಪಾದಯಾತ್ರೆ -ಜನಧ್ವನಿಯಂಗವಾಗಿ ಪಡುಬಿದ್ರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಹಾಗೂ ಇದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ ಅವರು ರಾಮಮಂದಿರ ದೇಣಿಗೆ ವಿಚಾರವಾಗಿ ತಮ್ಮ ವಿರುದ್ಧ ಕೇಳಿಬಂದ ಆರೋಪ ಗಳ ಕುರಿತು ಪ್ರತಿಕ್ರಿಯಿಸಿದರು. |
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತಂದಿದ್ದರಿಂದ ರೈತರಿಗೆ ಹೊಡೆತ ಬಿದ್ದಿದೆ. ಬೀಫ್ ಆಹಾರ ಸಂಸ್ಕೃತಿ. ಅದನ್ನು ತಡೆಯಲು ನೀವ್ಯಾರು? ನಾನು ಈವರೆಗೂ ಬೀಫ್ ತಿಂದಿಲ್ಲ ತಿನ್ನಬೇಕಾದರೆ ತಿಂತೀನಿ. ನೀವ್ಯಾರು ಕೇಳುವುದಕ್ಕೆ ಎಂದು ಪುನರುಚ್ಚರಿಸಿದ ಅವರು, ಗೋಹತ್ಯಾ ನಿಷೇಧ ಕಾನೂನನ್ನು ಅನಗತ್ಯವಾಗಿ, ಅದೂ ಕೂಡ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯದಲ್ಲೇನು ತುರ್ತು ಪರಿಸ್ಥಿತಿ ಇದೆಯೇ ಎಂದು ಪ್ರಶ್ನಿಸಿದರು.