ವಿದ್ಯಾರ್ಥಿನಿ ಬಲತ್ಕಾರಕ್ಕೆ ಎಸ್ಡಿಎಮ್ಸಿ ಸದಸ್ಯನಿಂದ ಯತ್ನ : ದೂರುದಾಖಲು
ಮುಂಡಗೋಡ : ವಿದ್ಯಾರ್ಥಿನಿಗೆ ಎಸ್ಡಿಎಮ್ಸಿ ಸದಸ್ಯನೋರ್ವ ಬಲತ್ಕಾರ ಮಾಡಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಉಗ್ಗಿನಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಜನವರಿ 19 ರಂದು ವಿದ್ಯಾರ್ಥಿನಿಯ ಪಾಲಕರು ಹೊಲಕ್ಕೆ ಹೋದಾಗ ಮನೆಯಲ್ಲಿ ಸಂತ್ರಸ್ಥೆ ಇರುವಾಗ ಮನೆಗೆ ನುಗ್ಗಿದ ಎಸ್ಡಿಎಮ್ಸಿ ಸದಸ್ಯ ನಾರಾಯಣ ನೇಸರಕರ ವಿದ್ಯಾರ್ಥಿನಿಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಚೀರಲು ಪ್ರಾರಂಭಿಸಿದ್ದನ್ನು ನೋಡಿ ಪಲಾಯನಗೈಯ್ಯುವಾಗ ಸಂತ್ರಸ್ಥೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮೋಬೈಲ್ ನಲ್ಲಿ ಚಿತ್ರವನ್ನು ತೆಗೆದುಕೊಂಡಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಈ ಚಿತ್ರವನ್ನು ತೋರಿಸುತ್ತೇನೆ ಎಂದು ಹೆದರಿಕೆ ಹಾಕಿದ್ದರಿಂದ ಸಂತ್ರಸ್ಥೆಯು ಯಾರಿಗೂ ಹೇಳಿರಲಿಲ್ಲ ಎಂದು ಹೇಳಲಾಗುತ್ತಿದೆ. ತಮ್ಮ ಹುಡುಗಿಯ ಚಲನವಲನ 4-5 ದಿನಗಳಿಮದ ಒಂದು ರೀತಿಯಲ್ಲಿರುವುದನ್ನು ಕಂಡು ಪಾಲಕರು ಪ್ರಶ್ನೆಸಿದಾಗ ಸಂತ್ರಸ್ಥೆಯು ನಡೆದ ಘಟನೆ ತಿಳಿಸಿದಾಗ ಪಾಲಕರು ಶುಕ್ರವಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ