ಭಟ್ಕಳ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜ.23ರಿಂದ 30ರ ವರೆಗೆ ಸಂವಿಧಾನ ಉಳಿಸಿ ಪೌರತ್ವ ಉಳಿಸಿ ರಾಷ್ಟ್ರೀಯ ಅಭಿಯಾನ ನಡೆಸುತ್ತಿದ್ದು ಅದರ ಪೋಸ್ಟರ್ ಬಿಡುಗಡೆಯನ್ನು ಗುರುವಾರ ಇಲ್ಲಿನ ವೆಲ್ಫೇರ್ ಆಸ್ಪತ್ರೆಯ ಸಭಾಂಗಣದಲ್ಲಿ ಮಾಡಲಾತು.
ಅಭಿಯಾನದ ಮೂಲಕ ದೇಶದಲ್ಲಿ ಜ್ಯಾರಿಯಾಗಿರುವ ಸಿಎಎ ಕರಾಳ ಕಾನೂನು ಹಾಗೂ ಎನ್.ಆರ್.ಸಿ ಮತ್ತು ಎನ್ಪಿಆರ್ ಕುರಿತಂತೆ ಜನಜಾಗೃತಿ ಮೂಡಿಸಲಾಗುವುದು ಅಲ್ಲದೆ ಮಾನವ ಸರಪಳಿ, ಕ್ಯಾಂಡಲ್ ಲೈಟ್ ಮಾರ್ಚ್, ಸಾಂಕೇತಿಕ ಸತ್ಯಗ್ರಹ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು ಎಂದು ವೆಲ್ಫೇರ್ ಪಾರ್ಟಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಡಾ.ನಸೀಮ್ ಖಾನ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಮುಖಂಡ ಮುಹಮ್ಮದ್ ಯೂನೂಸ್ ರುಕ್ನುದ್ದಿನ್, ಮುಖಂಡರಾದ ಅಬ್ದುಲ್ ಮಜೀದ್ ಕೋಲಾ, ಆಸಿಫ್, ಇಬ್ರಾಹೀಮ್ ಮಾಸ್ಟರ್, ಮತ್ತಿತರರು ಉಪಸ್ಥಿತರಿದ್ದರು.