ಸಂಕೇಶ್ವರ:ಸಮಾಜದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ಮುಟ್ಟಬೇಕು. ಈ ನಿಟ್ಟಿನಲ್ಲಿ ಭಕ್ತರು ದೇಹದಾನದ ಮೂಲಕ ಜನ್ಮ ದಿನಾ ಆಚರಿಸಿರುವುದು ಸಂತಸ ತಂದಿದೆ ಎಂದು ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮಿಜಿ ಹೇಳಿದರು.
ರವಿವಾರ ಜರುಗಿದ ಜಿಲ್ಲೆಯ ಏಕೈಕ ಜಗದ್ಗುರು ಪೀಠವಾಗಿರುವ ಹುಕ್ಕೇರಿ ತಾಲೂಕಿನ ನೀಡಸೋಸಿ ಜಗದ್ಗುರ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ 75ನೇ ಹುಟ್ಟು ಹಬ್ಬದ ನಿಮಿತ್ತ ಐವರಯ ಸದ್ಭಕ್ತರು ಶ್ರೀಗಳ ಜನ್ಮ ದಿನವನ್ನು ಅರ್ಥಪೂರ್ಣವಾಗಿ,ವಿನೂತನವಾಗಿ ಆಚರಿಸಿದ್ದಾರೆ.
ಪ್ರತಿಯೋಬ್ಬರ ಹುಟ್ಟು ಸಾವು ಮತ್ತೋಬ್ಬರಿಗೆ ಮಾದರಿಯಾಗಬೇಕು.ಸಮಾಜದಲ್ಲಿ ನಿರಂತರವಾಗಿ ದಾನ ಧರ್ಮದ ಕಾರ್ಯ ನಡೆಯುತ್ತಿರಬೇಕು. ದೇಹ ದಾನವು ದಾನದಲ್ಲಿ ಶ್ರೇಷ್ಠ ದಾನವಾಗಿದ್ದು ,ಜೀವಹೋದ ನಂತರ ಮತ್ತಷ್ಟು ಜೀವ ಉಳಿಸಲು ದೇಹದಾನ ಪ್ರೇರಣೆ ನೀಡುತ್ತದೆ ಎಂದರು .
ಈ ಸಂಧರ್ಭದಲ್ಲಿ ಚಂದ್ರಕಾಂತ ಶಂಕರ ನಾಯಿಕ ,ಕಲಗೌಡ ರಾಮಗೌಡ ಪಾಟೀಲ ರಾಮಚಂದ್ರ ಬಸಪ್ಪಾ ಮಾನೆ ,ಮಹಾದೇವ ಶಂಕರ ಜಕಾತೆ,ಸುವರ್ಣ ಮ ಜಕಾತೆ ತಮ್ಮ ದೇಹವನ್ನು ಬೈಲಹೊಂಗಲದ ರಾಮಣ್ಣವರ ಚಾರಿಟೇಬಲ ಟ್ರಸ್ಟ್ಗೆ ದಾನ ಮಾಡಿದರು