ಮಂಗಳೂರು : ಅಕ್ಟೋಬರ್ ಎಂಟರಂದು ಸುಳ್ಯ ತಾಲೂಕಿನ ಕಸ್ಬಾ ಗ್ರಾಮದ ಶಾಂತಿನಗರದಲ್ಲಿ ಸಂಪತಕುಮಾರ ಹತ್ಯೆ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಐವರನ್ನ ಬಂಧಿಸಿದ್ದಾರೆ
ಬಂಧಿತ ಐವರು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯವರಾಗಿದ್ದಾರೆ. ಭಾನುವಾರ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಎಂಬಲ್ಲಿ ಕೆಎ ೧೨, ಎಂ ಎ ೪೩೮೫ ಸಂಖ್ಯೆಯ ಸ್ವಿಪ್ಟ್ ಕಾರಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವರನ್ನ ಪತ್ತೆ ಮಾಡಿದ್ದಾರೆ.
ಈಗಾಗಲೇ ಕೃತ್ಯಕ್ಕೆ ಬಳಸಿದ ಕ್ವಾಲಿಸ್ ಕಾರು ಕೆಎ ೧೯, ಎಂಎಪ್ ೭೮೯ ವಾಹನವನ್ನ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕೊಲೆಯಾದ ಸಂಪತ್ 2019 ನೇ ಸಾಲಿನಲ್ಲಿ ಮಡಿಕೇರಿ ಯಲ್ಲಿ ನಡೆದ ಕಳಗಿ ಬಾಲಚಂದ್ರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಪ್ರಸ್ತುತ ಜಾಮೀನು ಪಡೆದು ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿತರು ಕಳಗಿ ಬಾಲಚಂದ್ರ ಅವರನ್ನು ಸಂಪತ್ ಕೊಲೆ ಮಾಡಿರುವ ಬಗ್ಗೆ ದ್ವೇಷದಿಂದ ಈ ಕೃತ್ಯವನ್ನು ಎಸಗಿರುವುದಾಗಿ ತಿಳಿದುಬಂದಿದೆ.
ಸುಳ್ಯ ಸಿಪಿಐ ನವೀನ್ ಚಂದ್ರ ಜೋಗಿ ರವರ ನೇತೃತ್ವದಲ್ಲಿ ಪಿಎಸ್ಐ ಹರೀಶ್ ಮತ್ತು ಡಿಸಿಐಬಿ ತಂಡ ಪತ್ತೆ ಕಾರ್ಯ ನಡೆಸಿದ್ದು ತನಿಖೆ ಮುಂದುವರಿಸಿದ್ದಾರೆ.