ಭಟ್ಕಳ : ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಭರತ್ ಎಸ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಅವರು ಗದಗ ಜಿ.ಪಂ ಸಿಇಓ ಆಗಿ ಪದೋನ್ನತಿ ಹೊಂದಿ ಹೋಗುತ್ತಿರುವ ಸಂದರ್ಭದಲ್ಲಿ ಶನಿವಾರ ಭಟ್ಕಳದ ಮಿನಿವಿಧಾನಸೌಧ ಕಚೇರಿಯಲ್ಲಿ ಸಾಹಿಲ್ ಆನಲೈನ್ ಮಾದ್ಯಮ ಸಂಸ್ಥೆ ವತಿಯಿಂದ ಬೀಳ್ಕೊಡುಗೆ ಸ್ವೀಕರಿಸಿದರು.
ನಂತರ ಮಾತನಾಡಿದ ಭರತ್ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನನಗೆ ಉತ್ತಮ ವಾತಾವರಣ ಸಿಕ್ಕಿದೆ. ಜಿಲ್ಲೆಯ ಜನ ಕೂಡ ಸಹಕಾರ ಮನೋಭಾವ ಹೊಂದಿದವರು. ಕಳೆದ ಕೆಲ ತಿಂಗಳಿಂದ ಇಲ್ಲಿ ಲಾಕ್ ಡೌನ್ ಪರಿಸ್ಥಿತಿ ಸಂದರ್ಭದಲ್ಲಿ ತಾವು ಸರ್ಕಾರ ಸೂಚಿಸಿದ ಪ್ರಕಾರ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ ಜನ ಕೂಡ ತುಂಬು ಹೃದಯದ ಸಹಕಾರ ನೀಡಿದ್ದರಿಂದ ಸಾಧ್ಯವಾಗಿದೆ ಎಂದರು.
ಸಾಹಿಲ್ ಆನಲೈನ್ ಪ್ರಧಾನ ಸಂಪಾದಕರಾದ ಇನಾಯತ್ ಗವಾಯಿ ಮಾತನಾಡಿ
ವರ್ಗಾವಣೆಯಾದ ತಾವು ಇನ್ನೂ ಉತ್ತಮ ಮಟ್ಟಕ್ಕೆ ಪದೋನ್ನತಿ ಹೊಂದಿ ಈ ಜಿಲ್ಲೆಯಲ್ಲಿ ಕೆಲಸ ಮಾಡುವ ಹಾಗೆ ಆಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಮುಬಾಶೀರ್ ಹಲ್ಲಾರೆ, ಯಾಹ್ಯಾ ಹಲ್ಲಾರೆ, ಸಪ್ವಾನ್ ಮೊಟಿಯಾ ಹಾಗೂ ಅಮಿನ್ ಜುಹೈಬ್ ಇದ್ದರು.