ಭಟ್ಕಳ: ಇಲ್ಲಿನ ಝೇಂಕಾರ ಮೆಲೋಡೀಸ್ ಸಂಸ್ಥೆಯ ನೃತ್ಯ ಶಿಕ್ಷಕಿ ನೃತ್ಯವಿದೂಷಿ ನಯನಾ ಪ್ರಸನ್ನರಿಗೆ ಜೆಸಿಐ ವತಿಯಿಂದ ‘ಸಾಧಕ ಶ್ರೀ2019 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೆಸಿಐ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಲಲಿತಾಕಲಾ ಕ್ಷೇತ್ರದಲ್ಲಿ ನಯನಾ ಪಸನ್ನ ಕಳೆದ 20 ವರ್ಷಗಳಿಂದ ನೃತ್ಯ, ಸಂಗೀತ ಹಾಗೂ ಚಿತ್ರಕಲಾ ಕ್ಷೇತ್ರವನ್ನು ಬೆಳೆಸಲು ಮಾಡಿದ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕೂಚಿಪುಡಿ ನ್ರತ್ಯವನ್ನು ಕರಗತ ಮಾಡಿಕೊಂಡಿರುವ ನಯನಾ ಭರತನಾಟ್ಯದಲ್ಲಿ ವಿದ್ವತ್ ಪದವಿಯೊಂದಿಗೆ ಕಥಕ್ ನಲ್ಲಿ ಡಿಪೆÇ್ಲಮಾ ಪದವಿ ಪಡೆದಿರುತ್ತಾರೆ. ಹಿಂದುಸ್ತಾನಿ ಸಂಗೀತದಲ್ಲಿ ಮೂರು ವರ್ಷಗಳ ಬಿ- ಮ್ಯೂಸಿಕ್ ಮಾಡಿ ಜೊತೆಗೆ ಕರ್ನಾಟಕ ಸಂಗೀತವನ್ನೂ ಮೈಗೂಡಿಸಿಕೊಂಡು ಭರತನಾಟ್ಯಕ್ಕೆ ಸ್ವತಃ ನಟ್ವಾಂಗದೊಂದಿಗೆ ನುಡಿಸಿ ಅವರೇ ಹಾಡುತಿದ್ದಾರೆ. ಇವರ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಪುರಸ್ಕರಿಸಿರುವದನ್ನು ಸ್ಮರಿಸಬಹುದು.
ಈ ಸಂದರ್ಭದಲ್ಲಿ ಜೆಸಿಐ ಅಬ್ದುಲ್ ಜಬ್ಬಾರ್, ಶ್ರೀನಾಥ್ ಪೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.