ಧಾರವಾಡ:ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೧೯ ರ ಮಾದರಿ ನೀತಿ ಸಂಹಿತೆ ಜಿಲೆಯಾದ್ಯಂತ ಜಾರಿಯಲ್ಲಿದ್ದು, ಇದುವರೆಗೆ (ಏಪ್ರಿಲ್ ೯ ರ ಬೆಳಗಿನ ಜಾವದವರೆಗೆ) ಜಿಲ್ಲೆಯ ವಿವಿಧ ಚೆಕ್ಪೋಸ್ಟ್ಗಳಲ್ಲಿ ಒಟ್ಟು ೪೩,೯೪,೮೫೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸುಮಾರು ೧೨ ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ೪೦೮೨.೩೧೫ ಲೀಟರ್ ಮದ್ಯ, ೬,೦೦೦ ರೂ. ಮೌಲ್ಯದ ಮಾದಕವಸ್ತುಗಳನ್ನು ಅಬಕಾರಿ ದಳ ವಶಪಡಿಸಿಕೊಂಡಿದೆ. ೪೯,೭೧,೫೯೦ ರೂ. ಮೌಲ್ಯದ ೨೩ ದ್ವಿಚಕ್ರ ವಾಹನಗಳು, ೩ ಮೋಬೈಲುಗಳು, ೧ ಕ್ಯಾಂಟರ್ ವಾಹನ, ೪೬ ಸೀರೆ, ೭೮ ಧೋತ್ರ, ೨೮ ಶಾಲು, ೧೦೦ ಪ್ರಚಾರ ಫಲಕಗಳು, ೨,೨೨೦ ಗ್ಯಾಸ್sಸ್ಟೊÃವಗಳು, ೫ ನಾಲ್ಕುಚಕ್ರದ ವಾಹನಗಳು, ಎರಡು ಆಟೋಗಳು, ೧೦೧ ಧ್ವಜಗಳು ಹಾಗೂ ಭಾರತೀಯ ಜನತಾ ಪಕ್ಷದ ೫೫೦ ಕರಪತ್ರಗಳನ್ನು ಎಫ್ಎಸ್ಟಿ, ಎಸ್ಎಸ್ಟಿ ತಂಡಗಳು ಹಾಗೂ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.