ಕಾರವಾರ: ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಜಿಲ್ಲಾ ಒಂಬುಡ್ಸಮನ್ ಆಗಿ ಆರ್.ಜಿ.ನಾಯಕ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಅಡಿಯಲ್ಲಿರುವ ವಿವಿಧ ಇಲಾಖೆಗಳು ಹಾಗೂ 231 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ವೈಯಕ್ತಿಕ ಸೌಲಭ್ಯ ಅಥವಾ ಸಾರ್ವಜನಿಕ ಕಾಮಗಾರಿಗಳಲ್ಲಿ ಮಾರ್ಗಸೂಚಿ ಉಲ್ಲಂಘನೆ ನಿಯಮ ಬಾಹಿರವಾಗಿ ಯಂತ್ರೋಪಕರಣ ಹಾಗೂ ಗುತ್ತಿಗೆದಾರರ ಬಳಕೆ, ಕಳಪೆ ಕಾಮಗಾರಿ ಹಣ ದುರುಪಯೋಗ ಪ್ರಕರಣ ಅಥವಾ ಇನ್ಯಾವುದೇ ಕುಂದುಕೊರತೆಗಳು ಕಂಡುಬಂದಲ್ಲಿ ಸಾರ್ವಜನಿಕರು, ಕುಶಲ ಮತ್ತು ಅಕುಶಲ ಕೆಲಸಗಾರರು ಸ್ವತಃ ಅಥವಾ ತಮ್ಮ ಪ್ರತಿನಿಧಿ ಮೂಲಕ ಆನ್ಲೈನ್ ಅಥವಾ ನೇರವಾಗಿ ಅಂಚೆ ಮೂಲಕ ಲಿಖಿತ ದೂರನ್ನು ಜಿಲ್ಲಾ ಒಂಬುಡ್ಸಮನ್ ಅವರಿಗೆ ಸಲ್ಲಿಸಬಹುದಾಗಿರುತ್ತದೆ.
ದೂರು ಸಲ್ಲಿಸಬೇಕಾದ ವಿಳಾಸ: ಒಂಬುಡ್ಸಮನ್ ಕಾರ್ಯಾಲಯ, ಅಭಿಲೇಖಾಲಯ ಕಟ್ಟಡ, ಜಿಲ್ಲಾ ಪಂಚಾಯತ ಕಚೇರಿ ಕಾಂಪ್ಲೆಕ್ಸ್, ಉತ್ತರ ಕನ್ನಡ, ಕಾರವಾರ. ಇ-ಮೇಲ್: [email protected], Toll free No:: 18004258666, ಮೊಬೈಲ್ ಸಂಖ್ಯೆ: 9448252321, ದೂರವಾಣಿ ಸಂಖ್ಯೆ: 08382-226862 ಆಗಿರುತ್ತದೆ.