ಗಂಗೊಳ್ಳಿ: ದೊಡ್ಡಹಿತ್ಲು ಪ್ರದೇಶದ ಬಡ ಅಂಗವಿಕಲ ಕುಟುಂಬದ ಬಗ್ಗೆ ಇತ್ತೀಚಿಗೆ ಪತ್ರಿಕಾ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಅಧ್ಯಕ್ಷರಾದ ಅಲ್ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ಸಾಹಬ್, ಇವರು 25000 ರೂಪಾಯಿ ಮೊತ್ತವನ್ನು ಇಂದು ಗಂಗೊಳ್ಳಿ ಜಮಾತ್ ಮುಖಂಡರ ಮೂಲಕ ಕುಟುಂಬಕ್ಕೆ ಹಸ್ಟಾಂತರಿಸಿದರು.
ಈ ಸಂಧರ್ಭದಲ್ಲಿ ಗಂಗೊಳ್ಳಿ ಜಮಾತುಲ್ ಮುಸ್ಲಿಮೀನ್ ಕಮಿಟಿ ಇದರ ಅಧ್ಯಕ್ಷರಾದ ಜನಾಬ್ ಪಿ ಎಮ್ ಹಸೈನಾರ್ ಸಾಹಬ್, ಉಪಾಧ್ಯಕ್ಷ ರಾದ ಜನಾಬ್ ಮೊಹಮ್ಮದ್ ಇಬ್ರಾಹಿಂ ಎಂ ಎಚ್, ಖಜಾಂಚಿ ಮೊಹಮ್ಮದ್ ಹನೀಫ್,ಸದಸ್ಯರಾದ ಮೊಹಮ್ಮದ್ ತಬರೇಜ್, ಗ್ರಾಮ ಪಂಚಾಯತ್ ಸದಸ್ಯರಾದ ದೇವಾನಂದ ಖಾರ್ವಿ ಹಾಗೂ ಖಲೀಲ್ ಉಪಸ್ಥಿತರಿದ್ದರು...