ಶಿರಸಿ: ‘ರಾಜ್ಯ ಮಟ್ಟದ ಜನ ಸಂಘಟನೆಗಳ ಪರ್ಯಾಯ ಜನತಾ ಅಧಿವೇಶನ’ದಲ್ಲಿ ಶಿರಸಿ ರವೀಂದ್ರ ನಾಯ್ಕ ರಿಂದ ವಿಷಯ ಮಂಡನೆ
ಶಿರಸಿ: ರಾಜ್ಯದ ಹಲವಾರು ಜನಪರ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ ಆವರಣದಲ್ಲಿ ಜರಗುತ್ತಿರುವ 2 ನೇ ದಿನದ ಸಪ್ಟೆಂಬರ್ 22 ಮಂಗಳವಾರ ದಂದು ಜರಗುತ್ತಿರುವ ‘ರಾಜ್ಯ ಮಟ್ಟದ ಜನ ಸಂಘಟನೆಗಳ ಪರ್ಯಾಯ ಜನತಾ ಅಧಿವೇಶನ’ ದಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ. ರವೀಂದ್ರ ನಾಯ್ಕ ಅರಣ್ಯ ಭೂಮಿಹಕ್ಕು ಮತ್ತು ಸಮಸ್ಯೆ ವಿಷಯದ ಮೇಲೆ ಅರಣ್ಯವಾಸಿಗಳ ಪರವಾದ ವಾದವನ್ನು ಮಂಡಿಸಲಿದ್ದಾರೆ ಎಂದು ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರಕಾರವು ಇಗಾಗಲೇ ರೈತ ಮತ್ತು ಕಾರ್ಮಿಕ ವಿರೋಧ ಸುಗ್ರೀವಾಜ್ಞೆಗಳ ವಿರುದ್ಧ ಐಕ್ಯ ಹೋರಾಟ ಪ್ರಾರಂಭಿಸಿದ್ದು, ಮೂಲ ಹಲವಾರು ಕಾನೂನುಗಳಿಗೆ ತಿದ್ದುಪಡಿ ತಂದು ಕಾನೂನಿನ ತತ್ವ ಸಿದ್ದಾಂತಕ್ಕೆ ವಿರೋಧವಾಗಿ ರೈತವಿರೋಧ ನೀತಿ ವ್ಯಕ್ತಪಡಿಸುತ್ತಿರುವ ಹಿನ್ನೆಲೇಯಲ್ಲಿ ವಿಧಾನ ಸಭೆಯಲ್ಲಿ ಜನಪ್ರತಿನಿಧಿಗಳು ವಿಧಾನಸಭಾ ಅಧಿವೇಶನದಲ್ಲಿ ಸಮರ್ಪಕವಾಗಿ ರೈತಪರ ಚಿಂತನೆ ವ್ಯಕ್ತಪಡಿಸದ ಹಿನ್ನೇಲೆಯಲ್ಲಿ ಐತಿಹಾಸಿಕ ಫ್ರೀಡಂಪಾರ್ಕನಲ್ಲಿ ಜನಸಾಮಾನ್ಯರ ಮುಂದೆ ಜನತಾ ಅಧಿವೇಶನವನ್ನ ಸರಕಾರಕ್ಕೆ ಪರ್ಯಾಯವಾಗಿ ಮತ್ತು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸದ್ರಿ ಕಾರ್ಯಕ್ರಮವನ್ನ ಸಂಘಟಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರಣ್ಯ ಭೂಮಿ ಹಕ್ಕು ಮತ್ತು ಸಮಸ್ಯೆ ವೀಷಯದ ಮೆಲೆ ಜರುಗಲಿರುವ ಜನತಾ ಅಧಿವೇಶನದಲ್ಲಿ ಅರಣ್ಯ ವಾಸಿಗಳ ಭೂಮಿ ಹಕ್ಕು, ವಸತಿ ಸಮಸ್ಯೆ, ಅರಣ್ಯ ವಾಸಿಗಳ ಸಂಪ್ರದಾಯ ಬದ್ಧ ಮತ್ತು ಸಾಗುವಳಿ, ಕಾನೂನು ವೈಫಲ್ಯ ಸಮಸ್ಯೆಗಳ ಪರಿಹಾರ ಮಾರ್ಗ ಮುಂತಾದ ಸಮಸ್ಯೆಗಳ ಕುರಿತು ರಾಜ್ಯಾಧ್ಯಂತ ಬಂದ ಸಾರ್ವಜನಿಕರ ಮುಂದೆ ಜನತಾ ಅಧಿವೇಶನದ ಪ್ರತಿನಿಧಿಗಳು ಚರ್ಚಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.