ಭಟ್ಕಳದ ರತನ್ ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆ
ಭಟ್ಕಳ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ 68ನೇ ರಾಷ್ಟ್ರೀಯ ಸೀನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ತಂಡಕ್ಕೆ ಭಟ್ಕಳ ಮಾವಿನಕುರ್ವೆ ತಲಗೋಡು ನಿವಾಸಿ ರತನ್ ಗಣಪತಿ ನಾಯ್ಕ ಆಯ್ಕೆಯಾಗಿದ್ದಾರೆ.
ಇವರು ಸುಳ್ಯ ನೆಹರೂ ಮೆಮೊರಿಯಲ್ ಕಾಲೇಜಿನ ಬಿಕಾಮ್ ವಿದ್ಯಾರ್ಥಿಯಾಗಿದ್ದು, ಭಟ್ಕಳದ ಕಟ್ಟೇವೀರ ಸ್ಪೋಟ್ರ್ಸ ಕ್ಲಬ್ಬಿನ ಸದಸ್ಯರಾಗಿದ್ದಾರೆ. ಕಳೆದ 2 ವರ್ಷಗಳಿಂದ ಪುಣೇರಿ ಯುವ ಪಲ್ಟನ್ ತಂಡದ ಸದಸ್ಯರಾಗಿ ತರಬೇತಿ ಪಡೆಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಏ.13ರಿಂದ 17ರವರೆಗೆ ಪಂದ್ಯಾವಳಿ ನಡೆಯಲಿದ್ದು, ರತನ್ ಆಯ್ಕೆಗೆ ಭಟ್ಕಳದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.