ರಮಝಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಮುಂಡಗೋಡ : ರಮಝಾನ್ ಹಬ್ಬದ ಪ್ರಯುಕ್ತ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಶ್ರೀಧರ ಮುಂದಲಮನಿ ಅಧ್ಯಕ್ಷತೆಯಲ್ಲಿ ತಾಲೂಕ ಮುಸ್ಲೀಂ ಸಮಾಜದ ಮುಖಂಡರ ಜೊತೆ ಶಾಂತಿ ಸಭೆ ಶುಕ್ರವಾರ ನಡೆಯಿತು.
ರಮಝಾನ್ ಹಬ್ಬದಂದು ಈದ್ಗಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ. ಮನೆಯಲ್ಲಿ ಹಬ್ಬವನ್ನು ಆಚರಣೆ ಮಾಡಬೇಕು. ಹಬ್ಬದೊಂದು ಕೈಕುಲಕುವುದು ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳವುದು ಮಾಡಬಾರದು ಎಂದು ಸೂಚಿಸಿದ ಅವರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಹಾಗೂ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗಬೇಕು ತಿಳಿಸಿದರು
ಸೋಮವಾರ ಹಬ್ಬವಿದೆ ರವಿವಾರ ಜನತಾ ಕಫ್ರ್ಯೂ ಇದೆ ಆದ್ದರಿಂದ ಎರಡು ತಾಸು ಅಂಗಡಿಗಳಿಂದ ದಿನಸಿಗಳನ್ನು ಖರೀಧಿಸಲು ಸಮಯವಕಾಶ ನೀಡಬೇಕು ಎಂದು ಮುಸ್ಲಿಂ ಬಾಂದವರು ತಹಶೀಲ್ದಾರರನ್ನು ಕೇಳಿ ಕೊಂಡರು. ಇದಕ್ಕೆ ನೀರಾಕರಿಸಿದ ತಹಶೀಲ್ದಾರ ಅಂದು ಯಾರೂ ಕೂಡ ಹೋರಗೆ ಬರುವಂತಿಲ್ಲ ಎಂದರು
ಸಭೆಯಲ್ಲಿ ಪಿಎಸೈ ಬಸವರಾಜ ಮಬನೂರ, ಮೋಹಿನಿ ಶೇಟ್ಟಿ, ಪಟ್ಟಣದ ಐದು ಮಸೀದಿಗಳ ಸೇರಿದಂತೆ ತಾಲೂಕಿನ ಆಯಾ ಮಸೀದಿಗಳ ಅಧ್ಯಕ್ಷರು ಸೇಕ್ರಟರಿಗಳು ಸದಸ್ಯರು ಹಾಗೂ ಸಮಾಜ ಮುಖಂಡರು ಉಪಸ್ಥಿತರಿದ್ದರು