ಮುಂಡಗೋಡ : ಕರ್ನಾಟಕ ದಲಿತ ರಕ್ಷಣಾವೇದಿಕೆಯಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 96ನೇ ಜಯಂತಿಯನ್ನು ಪಟ್ಟಣದ ನ್ಯಾಸರ್ಗಿ ರಸ್ತೆಯಲ್ಲಿರುವ ಗೋವಿಂದ ಶರೀಫ ಶಿವಯೋಗಿಗಳ ದೇವಸ್ಥಾನದಲ್ಲಿ ರವಿವಾರ ಬೆಳಗ್ಗೆ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಪಿಐ ಪ್ರಭುಗೌಡ ಡಿ.ಕೆ ಮಾತನಾಡಿ ನೀರಿನ ಅವಶ್ಯಕತೆ ಆಗತ್ಯತೆ ಕುರಿತು ರಾಮಕೃಷ್ಣ ಹೆಗಡೆಯವರ ವಿವೇಚನಾ ಶಕ್ತಿಯಿಂದ ತಾಲೂಕಿನಲ್ಲಿ ಕೆರೆಗಳು, ಜಲಾಶಯಗಳು ನಿರ್ಮಾಣವಾಗಿದ್ದು ಇದರಿಂದ ತಾಲೂಕಿನ ರೈತರು ಸಾರ್ವಜನಿಕರಿಗೆ ಕಾಡು ಪ್ರಾಣಿಪಕ್ಷಿಗಳಿಗೆ ದನಕರುಗಳಿಗೆ ಬಹಳಷ್ಟು ಅನುಕೂಲವಾಗಿದೆ. ಇಲ್ಲಿ ಕೆರೆಗಳು ಇರುವುದು ನೋಡಿದರೆ ತಾಲೂಕಿನ ಹೊರಗಿನವರಿಗೆ ಅದರ ಮೌಲ್ಯ ಏನೆಂಬುವುದು ಗೊತ್ತಾಗುತ್ತದೆ. ಕೆರೆ ಕಟ್ಟೆಗಳನ್ನು ನಿರ್ಮಿಸಿದ ಮಹಾನುಭಾವರನ್ನು ನೆನೆಪಿಸಿಕೊಳ್ಳುವುದು ಶ್ರೇಯಸ್ಕರ ಎಂದರು
ಗ್ಯಾಸ ವಿತರಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಓಶಿಮಠ ಮಾತನಾಡಿ ರಾಮಕೃಷ್ಣ ಹೆಗಡೆಯವರ ರಾಜಕೀಯ ಜೀವನದಲ್ಲಿ ಅಧಿಕಾರ ಅನುಭವಿಸಿದ ಹಾಗೂ ತಮ್ಮ ಪಕ್ಷದ ನಿಷ್ಠಾವಂತರೆಂದು ನಂಬಿದವರಿಂದ ನೋವು ಅನುಭವಿಸಿದ ದಿನಗಳ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪ್ರತಿ ವರ್ಷವು ರಾಮಕೃಷ್ಣ ಹೆಗಡೆಯವರ ಜಯಂತಿಯನ್ನು ಮರೆಯದೆ ಆಯೋಜಿಸುತ್ತಿರುವ ದಲಿತ ನಾಯಕ ಚಿದಾನಂದ ಹರಿಜನ ರಗೆ ಶ್ಲಾಘಿಸಿದರು
ಕಾರ್ಯಕ್ರಮದಲ್ಲಿ ಹನಮಂತ ಆರೇಗೊಪ್ಪ, ಎಂ.ಎಚ್. ಕಲಾಲ ಮಾತನಾಡಿದರು. ಕಾರ್ಯಕ್ರಮವನ್ನು ಚಿದಾನಂದ ಹರಿಜನ ನಿರ್ವಹಿಸಿದರು
ಮಂಜುನಾಥ ವರ್ಣೇಕರ, ಶ್ರೀಕಾಂತ ಸಾನು, ಹನಮಂತ ಭಜಂತ್ರಿ, ಎಸ್.ಎಸ್.ಪಾಟೀಲ, ರಬ್ಭಾನಿ ಪಟೇಲ, ಗಿಡ್ಡಪ್ಪ ಹಿರಳ್ಳಿ, ಶಿವಾನಂದ ಮೂಡಸಾಲಿ, ಮಹಾಂತಪ್ಪ ಜೋಳz,À ಹವಾಲ್ದಾರ ಸೋಮಶೇಖರ ಮೈತ್ರಿ ಸೇರಿದಂತೆ ಮುಂತಾದವರು ಇದ್ದರು