ಕೋಲಾರ: ಜಿಲ್ಲಾದ್ಯಾಂತ ಕೋರೋನಾ ವೈರಸ್ ಲಾಕ್ಡೌನ್ನಿಂದ ನಷ್ಟವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಬೆಳೆ ಮಾಡಲು ಉಚಿತ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಸರ್ಕಾರದಿಂದ ನೀಡಬೇಕೆಂದು ರೈತಸಂಘದಿಂದ ತೋಟಗಾರಿಕೆ ಸಹಾಯಕ ನಿರ್ದೇಶಕರ ಮುಖಾಂತರ ಮುಖ್ಯಮಂತ್ರಿಗಳನ್ನು ಮನವಿ ನೀಡಿ ಅಗ್ರಹಿಸಲಾಯಿತು.
ಮನವಿ ನೀಡಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಹಾಮಾರಿ ಕೋರೋನಾ ನಿಯಂತ್ರಣಕ್ಕೆ ಭಾರತಾದ್ಯಾಂತ ಲಾಕ್ಡೌನ್ ಮಾಡಿರುವುದಕ್ಕೆ ರೈತರ ಅಭ್ಯಂತರವಿಲ್ಲ ಆದರೆ ಜಿಲ್ಲಾದ್ಯಾಂತ ಸಾಲ ಮಾಡಿ ಬೆಳೆದಿರುವ ಸಾವಿರಾರು ಎಕರೆ ಟೋಮೋಟೋ ಕ್ಯಾಪ್ಸಿಕಾಂ, ಹೂಕೋಸು ಮತ್ತಿತರ ವಾಣಿಜ್ಯ ಬೆಳೆಗಳು ಸಮೃದ್ದವಾಗಿ ಪಸಲು ಬಂದಿದ್ದು, ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರಸ್ತೆಗೆ ಸುರಿಯುವ ಜೊತೆಗೆ ತೋಟದಲ್ಲಿ ಬೆಳೆ ನಾಶ ಮಾಡಬೇಕಾದ ಪರಿಸ್ಥಿತಿ ಜೊತೆಗೆ ಸಾಲ ಮಾಡಿ ಹಾಕಿದ ಬಂಡವಾಳ ಬಾರದೆ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟದಲ್ಲಿವೆ.
ಜೊತೆಗೆ ಈಗಾಗಲೇ ಸಾಲದ ಸುಳಿಗೆ ಸಿಲುಕಿ ಮುಂದೆ ಬೆಳೆಯಿಡಲು ಹಣವಿಲ್ಲದೆ ಸಾಲ ಸಿಗದೆ ತೊಂದರೆಯಲ್ಲಿರುವ ರೈತ ಕುಟುಂಬಗಳನ್ನು ರಕ್ಷಣೆ ಮಾಡಲು ಬೆಳೆ ನಷ್ಟ ಪರಿಹಾರವನ್ನು ನೀಡುವ ಜೊತೆಗೆ ಮುಂದೆ ಕೃಷಿ ಮಾಡಲು ಅಗತ್ಯವಿರುವ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಉಚಿತವಾಗಿ ಸರ್ಕಾರದಿಂದ ನೀಡಬೇಕೆಂದು ಅಗ್ರಹಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಸಹ ನಿರ್ದೇಶಕರಾದ ಮಂಜುಳಾ ಜಿಲ್ಲಾದ್ಯಾಂತ ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ. ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿ, ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ, ಐತಾಂಡಹಳ್ಳಿ ಮಂಜುನಾಥ್, ನಳಿನಿ.ವಿ ಮುಂತಾದವರಿದ್ದರು
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ