ಭಟ್ಕಳ : ತಾಲೂಕಿನಾದ್ಯಂತ ಮಳೆಗಾಲ ಆರಂಭವಾಗಿದ್ದು ಮುಂಗಾರು ಮಳೆ ಪ್ರವೇಶ ಸ್ವಲ್ಪ ತಡವಾದರೂ ಸಹ ವಾಯುಭಾರ ಕುಸಿತದಿಂದ ವಿವಿಧೆಡೆ ಮಳೆ ಸುರಿಯುತ್ತಿದ್ದು. ಹೀಗಾಗಿ ಬಣ್ಣ ಬಣ್ಣದ ಕೊಡೆ ತಾಡಪತ್ರೆ ಪ್ಲಾಸ್ಟಿಕ್ ಹೊದಿಕೆ ಹಾಗೂ ರೇನ್ ಕೋರ್ಟ್ ಗಳಿಗೆ ಇದೀಗ ಭಾರಿ ಬೇಡಿಕೆ ಬಂದಿದ್ದು. ಭಟ್ಕಳದ ಮಾರುಕಟ್ಟೆಗೆ ಹಾಗೂ ರಸ್ತೆ ಪಕ್ಕದಲ್ಲಿ ಲಗ್ಗೆ ಇಟ್ಟಿದ್ದು ಭರ್ಜರಿ ವ್ಯಾಪಾರವಾಗುತ್ತಿದ್ದು ಜನರು ಖರೀದಿಯಲ್ಲಿ ಮಗ್ನರಾಗಿದ್ದಾರೆ
ತಾಲ್ಲೂಕಿನಾದ್ಯಂತ ಕಳೆದ 4-5 ದಿನಗಳಿಂದ ಆಗಾಗ ಬಿಸಿಲು ಸಹಿತ ಮಳೆಯಾಗುತ್ತಿದ್ದು. ಜನರಿಗೆ ಬೇಸಿಗೆ ಮತ್ತು ಮಳೆಗಾಲದ ಎರಡು ಅನುಭವವಾಗುತ್ತಿದ್ದ ಹಿನ್ನೆಲೆ ಮನೆಯ ಮೂಲೆಯಲ್ಲಿದ್ದ ಕೊಡೆಗಳೆಲ್ಲ ಈಗ ಹೊರ ಬರುತ್ತಿದ್ದು .ಕೆಲವರು ಸಣ್ಣಪುಟ್ಟ ರಿಪೇರಿ ಇರುವ ಕೊಡೆಗಳನ್ನು ಸರಿಪಡಿಸಿ ಕೊಂಡರೆ ಇನ್ನೂ ಕೆಲವರು ಹೊಸ ಕೊಡೆಗಳನ್ನು ಕೊಳ್ಳಲು ಮಾರುಕಟ್ಟೆಯ ಕಡೆ ಮುಖ ಮಾಡುತ್ತಿದ್ದಾರೆ. ತಾಲ್ಲೂಕಿನ ಪಟ್ಟಣ ವ್ಯಾಪ್ತಿಯಲ್ಲಿನ ಮಣ್ಕುಳಿ, ರಂಗಿನಕಟ್ಟೆ, ತೆಂಗಿನಗುಂಡಿ ಕ್ರಾಸ್, ಹಾಗೂ ಸಂಶುದ್ದೀನ ಸರ್ಕಲನ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಹಳ್ಳಿ ವ್ಯಾಪ್ತಿಗೆ ಬಂದರೆ ಚಿಕ್ಕ ಪುಟ್ಟ ಕಿರಾಣಿ ಅಂಗಡಿಗಳಲ್ಲಿಯೂ ಸಹ ಮಾರಾಟ ಜೋರಾಗಿದೇ, ಮಳೆಯನ್ನು ಲೆಕ್ಕಿಸದೆ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಬಣ್ಣ ಬಣ್ಣದ ಕೊಡೆಗಳು ಜನರು ಆಕರ್ಷಿಸುತ್ತಿವೆ. ಕೇವಲ ಕಡೆಗಳಲ್ಲಿ ರೇನ್ ಕೋರ್ಟ್ ಜರ್ಕಿನ್ ಹಾಗೂ ತಾಡಪಾತ್ರೆಯ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಬಣ್ಣದ ಗಾತ್ರದ ಕೊಡೆಗಳು ಮಾರಾಟವಾಗುತ್ತಿದೆ
ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಮಳೆಯಿಂದ ರಕ್ಷಣೆ ಪಡೆಯಲು ಕೊಡೆ ರೇನ್ ಕೋರ್ಟ್ ಗಳನ್ನು ಪಡೆಯುವುದು ಅನಿವಾರ್ಯವಾಗಿದೆ.ಹಂಚಿನ ಮನೆಗಳಿಗೆ ಹೊದಿಕೆಗೆ ಕಿಟಕಿ ಬಾಗಿಲುಗಳಿಂದ ನೀರು ಬರದಂತೆ ತಡೆಯಲು ಉಪಯೋಗಿಸುವ ತಾಡಪತ್ರಿಗಳ ಖರೀದಿಯಲ್ಲಿ ಗ್ರಾಹಕರ ತೊಡಗಿದ್ದಾರೆ .
ಈ ವರ್ಷ ಮಂಡ್ಯ ಮೇಲುಕೋಟೆಯ ವ್ಯಾಪಾರಸ್ಥರು ಹೆಚ್ಚಾಗಿ ಕಂಡು ಬರುತ್ತಿದ್ದು. ಕಳೆದ ಬಾರಿಗಿಂತ ಈ ಬಾರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗದೆ ಕೊಡೆಗಳು ಸಾಮಾನ್ಯವಾಗಿ 150 ರಿಂದ 250 ರವರೆಗೆ ಚಿಕ್ಕ ಮಕ್ಕಳ ಬಣ್ಣದ ಛತ್ರಿಗಳು 100 ರಿಂದ200 ರವರೆಗೆ ಲಭ್ಯವಾಗುತ್ತಿದೆ ಅದರಲ್ಲೂ ಮಡಚಿ ಬ್ಯಾಗಿ ನಲ್ಲಿ ಇಡಬಹುದಾದ ಹಾಗೂ ವಿವಿಧ ವಿನ್ಯಾಸವುಳ್ಳ ಛತ್ರಿಗಳಿಗೆ ಬೇಡಿಕೆ ಹೆಚ್ಚಿದೆ 300 ರಿಂದ 600 ರವರಿಗೆ ಸಿಗುತ್ತಿದ್ದು ರೇನ್ ಕೋರ್ಟ್ ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೆ.